Publish Date: Sat, 29 Sep 2018 (16:32 IST)
Updated Date: Sat, 29 Sep 2018 (16:35 IST)
ಬೀದರ್ ಜಿಲ್ಲೆಯ ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದರ್ ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಯಿತು.
ರ್ಯಾಲಿ ಮುಖಾಂತರ ಪ್ರತಿಭಟನೆ ನಡೆಸಿದ ಬೀದರ್ ಪತ್ರಕರ್ತ ಸಂಘಟನೆಗಳ ಒಕ್ಕೂಟದ ಸದಸ್ಯರು, ಅವಹೇಳನಕಾರಿ ಮಾತನಾಡಿದ ಶಾಸಕರ ಕ್ರಮ ಖಂಡಿಸಿದರು.
ಶಾಸಕ ಬಿ.ನಾರಾಯಣರಾವ್ ವಿರುದ್ಧ ನ್ಯಾಯಾಲಯಕ್ಕೆ ಪತ್ರಕರ್ತರ ಸಂಘದಿಂದ ದೂರು ಸಲ್ಲಿಸಲು ನಿರ್ಧಾರ ಮಾಡಲಾಯಿತು.
ಒಂದು ವಾರದೊಳಗೆ ಶಾಸಕ ಬಿ.ನಾರಾಯಣರಾವ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಯಿತು.
ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಬೀದರ್ ಜಿಲ್ಲಾಧಿಕಾರಿ ಮುಖಾಂತರ ಸ್ಪೀಕರ್ ರಮೇಶ ಕುಮಾರ್ ಮನವಿ ಸಲ್ಲಿಕೆ ಮಾಡಲಾಯಿತು.
ಬೀದರ್ನಲ್ಲಿ ಇತ್ತೀಚೆಗೆ ನಡೆದ ಐಕ್ಯತೆ ಸಮಾವೇಶದಲ್ಲಿ ಮಾಧ್ಯಮಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಶಾಸಕ ನಾರಾಯಣರಾವ್ ನೀಡಿದ್ದರು.