Select Your Language

Notifications

webdunia
webdunia
webdunia
webdunia

ನಕಲಿ ಪತ್ರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ

ನಕಲಿ ಪತ್ರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ
bangalore , ಮಂಗಳವಾರ, 9 ಮೇ 2023 (20:00 IST)
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನನ್ನ ಹೆಸರಲ್ಲಿ ನಕಲಿ ಪತ್ರವನ್ನ ಬರೆಯಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.ಇದು ನಾನು ಬರೆದಿರುವ ಪತ್ರ ಅಲ್ಲ, ಕೆಲವುಕುತಂತ್ರಿಗಳು ಮಾಡಿರೋ ಕೆಲಸ.ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಭಿನ್ನಾಪ್ರಾಯ ಉಂಟುಮಾಡಲು ಈ ನಕಲಿ ಪತ್ರವನ್ನ ಸೃಷ್ಠಿ ಮಾಡಿ, ಹುನ್ನಾರ ನಡೆಸಿದ್ದಾರೆ.ಇದನ್ನ ನಾನು ಸ್ಪಷ್ಟ ಪಡಿಸುತ್ತೇನೆ, ಇದೊಂದು ನಕಲಿ ಪತ್ರ, ನಾನು ಯಾವ ಪತ್ರವನ್ನು ಬರೆದಿಲ್ಲ.RSS ನಂತ ಕುತಂತ್ರಿಗಳು ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.ಜನರಲ್ಲಿ ನಾನು ಮನವಿ ಮಾಡುತ್ತೇನೆ, ಈ ಪತ್ರವನ್ನ ಜನ ತಿರಸ್ಕಾರ ಮಾಡಬೇಕು.ಈ ನಕಲಿ ಪತ್ರದ ಬಗ್ಗೆ ಚುನಾವಣಾ ಆಯೋಗಕ್ಕೆ ಹಾಗೂ ಪೊಲೀಸರಿಗೆ ದೂರು ನೀಡುತ್ತೇನೆ.ಈ ಪತ್ರ ಸೃಷ್ಟಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮಧ್ಯ ರಾತ್ರಿವರೆಗೂ ಮೆಟ್ರೋ ವಿಸ್ತೀರ್ಣ