Webdunia - Bharat's app for daily news and videos

Install App

ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ವಾರಕ್ಕೆ ಒಂದು ದಿನ ರಜೆ

Webdunia
ಬುಧವಾರ, 8 ಡಿಸೆಂಬರ್ 2021 (19:49 IST)
ಪತಿ-ಪತ್ನಿ ನಡುವೆ ಜಗಳ ಆಗೋದು ಕಾಮನ್. ಕೆಲವೊಮ್ಮೆ ಜಗಳಗಳು ವಿಕೋಪಕ್ಕೆ ತಿರುಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಒಬ್ಬ ಹೆಂಡ್ತಿ ಜೊತೆ ಜೀವನ ನಡೆಸೋದು ಕಷ್ಟ ಅಂತ ಇಬ್ಬರನ್ನು ಮದುವೆ ಆಗಿರುವ ವ್ಯಕ್ತಿಯ ಮುಂದೆ ಹೇಳುತ್ತಿರುತ್ತಾರೆ. ಎರಡು ಮದುವೆಯಾದ ಗಂಡನ ವಿಚಿತ್ರ ಸುದ್ದಿಯೊಂದು ವರದಿಯಾಗಿದೆಎರಡು ಮದುವೆ ಆದ ವ್ಯಕ್ತಿಯ ಗೋಳು ಕಂಡವರಿಗೆ ಗೊತ್ತು. ಯಾವ ಪತ್ನಿಯನ್ನ ಸಮಾಧಾನ ಮಾಡಬೇಕು ಅನ್ನೋ ಗೊಂದಲದಲ್ಲಿಯೇ ಜೀವನ ಕಳೆಯುತ್ತಾರೆ.  ಇಬ್ಬರು ಪತ್ನಿಯರು ಒಂದೇ ಮನೆಯಲ್ಲಿದ್ದರಂತೂ ಮನಸ್ತಾಪ ಹೆಚ್ಚು ಇರುತ್ತೆ ಅನ್ನೋ ಕಾರಣಕ್ಕೆ ಎರಡು ಮದುವೆಯಾದ್ರೂ, ಬೇರೆ ಬೇರೆ ಮನೆ ಮಾಡಿರುತ್ತಾರೆ.  ಎರಡು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸುತ್ತಿರುವವರು ನಮ್ಮ ನಿಮ್ಮ ಮಧ್ಯೆ ಇದ್ದಾರೆ,ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ ಇಬ್ಬರು ಪತ್ನಿಯರು ಪತಿಯನ್ನು ವಾರಕ್ಕೆ ಮೂರು ದಿನದಂತೆ ಹಂಚಿಕೊಂಡಿದ್ದಾರೆ. ಈ ಸುದ್ದಿ ಪ್ರಕಟವಾಗಿರುವ ಪೇಪರ್ ತುಣುಕಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.ರಾಂಚಿಯ ನಿವಾಸಿಯಾಗಿರುವ ರಾಜೇಶ್ ಎಂಬಾತನಿಗೆ ಇಬ್ಬರು ಮಡದಿಯರು, ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಮನೆ ಮಾಡಿರುವ ರಾಜೇಶ್, ಒಬ್ಬರ ಬಳಿಯೇ ಹೆಚ್ಚು ಸಮಯ ಕಳೆಯುತ್ತಿದ್ದನು.ಪತಿಯ ನಡವಳಿಕೆಯಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಕಳೆದ ಐದು ದಿನಗಳಿಂದ ಗಂಡ ಮನೆಗೆ ಬಂದಿಲ್ಲ ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ಪತಿ ರಾಜೇಶ್ ಮತ್ತು ಆತನ ಮತ್ತೋರ್ವ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಪತ್ನಿಯರಿಬ್ಬರು ವಾರಕ್ಕೆ ಮೂರು- ಮೂರು ದಿನದಂತೆ ಪತಿಯನ್ನು ಹಂಚಿಕೊಂಡಿದ್ದಾರೆ. ಉಳಿದ ಒಂದು ದಿನವನ್ನು ಆತನಿಗೆ ರಜೆ ರೂಪದಲ್ಲಿ ನೀಡಿದ್ದಾರೆ, ಆ ಒಂದು ದಿನ ರಾಜೇಶ್ ತನ್ನ ಇಷ್ಟದಂತೆ ಇರಬಹುದು. ಸದ್ಯ ಸುದ್ದಿ ವೈರಲ್ ಆಗಿದ್ದು, ಹೀಗೂ ರಜೆ ಸಿಗುತ್ತಾ ಅಂತ ಜನರು ನಗುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

HD Kumaraswamy, ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು: ಕುಮಾರಸ್ವಾಮಿ ಗರಂ

Rahul Gandhi: ನಿಮ್ಮ ಹಣವನ್ನು ನಿಮಗೇ ಮರಳಿಸುವುದೇ ನಮ್ಮ ಉದ್ದೇಶ: ರಾಹುಲ್ ಗಾಂಧಿ

ಜನರ ಋಣ ತೀರಿಸಲು ಆರನೇಯ ಭೂ ಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

Covid 19: ಮತ್ತೆ ಶುರುವಾಯ್ತು ಕೊರೋನಾ ಹಾವಳಿ: ಈಗ ಬಂದಿರುವ ಹೊಸ ವೈರಸ್ ಯಾವುದು

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜಣ್ಣ ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ, ಕಾರಣವೇನು ಗೊತ್ತಾ

ಮುಂದಿನ ಸುದ್ದಿ
Show comments