Publish Date: Sat, 20 Aug 2022 (19:07 IST)
Updated Date: Sat, 20 Aug 2022 (19:10 IST)
ಅಂದು ಚಪ್ಪಲಿ ಕಳವು ಮಾಡ್ತಿದ್ದ ಸಣ್ಣ ಕಳ್ಳ ಇಂದು ಲಕ್ಷ ಲಕ್ಷ ಚಿನ್ನಾಭರಣ ಎಗರಿಸೋ ಕುಖ್ಯಾತ ಮನೆಗಳ್ಳನಾಗಿದ್ದು, ಇದೀಗ ಆರೋಪಿಯನ್ನು HSR ಲೇಔಟ್ನ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಯಾಗಿದ್ದಾನೆ. ಮೊದಲಿಗೆ ದೇವಸ್ಥಾನಗಳ ಬಳಿ ಚಪ್ಪಲಿ ಕಳವು ಮಾಡ್ತಿದ್ದ ಈತ ತನ್ನ ತಂದೆ ಸಾವಿನ ಬಳಿಕ ಕಳ್ಳತನ ಕೃತ್ಯವೆಸಗಲು ಮುಂದಾಗಿದ್ನಂತೆ. ಬಳಿಕ ಮನೆ ಕಳವು ಕೃತ್ಯಕ್ಕೆ ಜಂಪ್ ಆಗಿದ್ದು, ಬಾಡಿಗೆ ಮನೆ ಮಾಡುವ ನೆಪದಲ್ಲಿ ಮನೆಗಳನ್ನು ನೋಡಿ ಕಳ್ಳತನಕ್ಕೆ ಸ್ಕೆಚ್ ಹಾಕ್ತಿದ್ನಂತೆ. ಬಾಡಿಗೆಗೆ ಮನೆ ನೋಡುವಾಗ ಮನೆಯ ಬೀಗದ ಪೋಟೋ ತೆಗೆದುಕೊಳ್ತಿದ್ದ ಆರೋಪಿ
ಬಳಿಕ ಬೀಗದ ನಕಲಿ ಕೀ ಮಾಡಿಸಿಕೊಂಡು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಕನ್ನ ಹಾಕ್ತಿದ್ನಂತೆ. ಆರೋಪಿ ಮುರುಗೇಶ್ ಪಾಳ್ಯ ಪಾರ್ಥಿವ್ ಹೈಟ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದು, ನಗರದಾದ್ಯಂತ 46 ಕೇಸ್ಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿ ಬಂಧನದಿಂದ 7 ಮನೆಗಳವು ಪ್ರಕರಣ ಪತ್ತೆಯಾಗಿದ್ದು, 750 ಗ್ರಾಂ ಚಿನ್ನಾಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.