Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಟ ಅಪ್ಪು ನಮ್ಮನ್ನಗಲಿ ಐದು ದಿನವಾಗಿದೆ. ಇಂದು ಪುನೀತ್ ಸಮಾಧಿಗೆ ಹಾಲು-ತುಪ್ಪ ಅರ್ಪಿಸಲಾಯ್ತು.ರಾಜ್ ಕುಟುಂಬಸ್ಥರು ಆಗಮಿಸಿ,ಕಾರ್ಯ ನೆರವೇರಿಸಿದ್ರು. ರಾಜ್ ಹುಟ್ಟೂರು ಗಾಜನೂರಿನಿಂದಲೂ ಕುಟುಂಬಸ್ಥರು ಬಂದಿದ್ದಾರೆ. ಗಾಜನೂರಿನಿಂದ 200ಕ್ಕೂ ಹೆಚ್ಚು ಮಂದಿ ಸಮಾಧಿ ಬಳಿ ಬಂದಿದ್ದಾರೆ.ನಟ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜಕುಮಾರ್ ಸೇರಿದಂತೆ ಕುಟುಂಬದ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಪುನೀತ್ ನಾನ್ ವೆಜ್ ಪ್ರಿಯರಾಗಿದ್ದರಿಂದ ಕಬಾಬು,ಬಿರಿಯಾನಿ, ಇಡ್ಲಿ , ಕಾಳು ಗೊಜ್ಜು, ಮೊಟ್ಟೆ ಬಿರಿಯಾನಿ, ಬಜ್ಜಿ , ಐದಾರು ವೈರಟಿ ಸಿಹಿ ತಿನಿಸುಗಳನ್ನು ಎಡೆ ಇಡಲಾಗಿದೆ. ಅಪ್ಪುವಿಗೆ ಪ್ರಿಯವಾದ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್ ಕೂಡ ಎಡೆ ಇಡಲಾಗಿದೆ.