Webdunia - Bharat's app for daily news and videos

Install App

ಬಡವರ ಸರ್ಕಾರ ಎನ್ನುತ್ತೀರಿ ನಿಮಗೆ ಮಾತ್ರ ಐಷಾರಾಮಿ ಕಾರು: ಸಿಎಂ ಸಿದ್ದರಾಮಯ್ಯ ಕಾರಿಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ

Krishnaveni K
ಬುಧವಾರ, 19 ಫೆಬ್ರವರಿ 2025 (11:12 IST)
ಬೆಂಗಳೂರು: ಇತ್ತೀಚೆಗೆ ಮಂಡಿ ನೋವಿನಿಂದಾಗಿ ವೀಲ್ ಚೇರ್ ನಲ್ಲೇ ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಈಗ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಆದರೆ ಅವರ ಕಾರಿನ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.

ಯಾವತ್ತೂ ಓಡಾಡುವ ಸರ್ಕಾರಿ ಕಾರು ಬಿಟ್ಟು ಸಿದ್ದರಾಮಯ್ಯ ಈಗ ಐಷಾರಾಮಿ ಕಾರು ತರಿಸಿಕೊಂಡು ಓಡಾಡುತ್ತಿದ್ದಾರೆ. ನಿನ್ನೆ ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯ ಇದೇ ಖಾಸಗಿ ಕಾರಿನಲ್ಲಿ ಬಂದಿಳಿದಿದ್ದರು.

ಇದಕ್ಕೆ ಮೊದಲು ಸರ್ಕಾರೀ ಕಾರನ್ನು ಬಳಸುತ್ತಿದ್ದರು. ಆದರೆ ಆ ಕಾರಿಗೆ ಹತ್ತುವುದು ಇಳಿಯುವುದು ಸಿದ್ದರಾಮಯ್ಯಗೆ ಮಂಡಿ ನೋವಿನಿಂದಾಗಿ ತೀರಾ ಸಮಸ್ಯೆಯಾಗುತ್ತಿತ್ತಂತೆ. ಈ ಕಾರಣಕ್ಕೆ ಅವರೀಗ ಖಾಸಗಿ ಕಾರನ್ನು ಬಳಸುತ್ತಿದ್ದಾರೆ. ಒಂದು ಕೋಟಿ ರೂ. ಬೆಲೆ ಬಾಳುವ ಟಯೊಟಾ ವೆಲ್ ಫೈರ್ ಕಾರು ಬಳಸುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳ ಬಳಿ ಈ ಕಾರಿದೆ.

ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದರ ಬಗ್ಗೆ ನೆಟ್ಟಿಗರು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮಂಡಿ ನೋವು ಎಂದು ನಿಮಗೇನೋ ಐಷಾರಾಮಿ ಕಾರಿನಲ್ಲಿ ಓಡಾಡುವ ತಾಕತ್ತಿದೆ. ಆದರೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರು ದಿನನಿತ್ಯದ ವೆಚ್ಚ ಸರಿದೂಗಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಬಡವರ ಸರ್ಕಾರ ಎನ್ನುತ್ತೀರಿ, ನೀವು ಮಾತ್ರ ಐಷಾರಾಮಿ ಕಾರಿನಲ್ಲಿ ಓಡಾಡುತ್ತೀರಿ ಎಂದು ಇನ್ನು ಕೆಲವರು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

Pakistan ಉಗ್ರರಿಗೆ ಶುರುವಾಯ್ತು ಅಜ್ಞಾತ ಶೂಟರ್ ಭಯ

ಮುಂದಿನ ಸುದ್ದಿ
Show comments