ರಾಷ್ಟ್ರೀಯ ಧರ್ಮ ಸಂಸದ್ ಸಡಗರ

Webdunia
ಭಾನುವಾರ, 2 ಸೆಪ್ಟಂಬರ್ 2018 (18:31 IST)
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಳಿಯ ಕನ್ಯಾಡಿಯಲ್ಲಿ  ಎರಡು ದಿನಗಳ ಕಾಲ ರಾಷ್ಟ್ರೀಯ ಧರ್ಮ ಸಂಸದ್  ನಡೆಯಲಿದೆ. 2 ಸಾವಿರಕ್ಕೂ ಹೆಚ್ಚು ಸಾಧು ಸಂತರು  ಪಾಲ್ಗೊಳ್ಳಲಿದ್ದಾರೆ.

ಧರ್ಮಸ್ಥಳ ಬಳಿಯ ಕನ್ಯಾಡಿ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮ ಕ್ಷೇತ್ರದಲ್ಲಿ  ಎರಡು ನಡೆಯುವ ರಾಷ್ಟ್ರೀಯ ಧಾರ್ಮ ಸಂಸದ್ ನಲ್ಲಿ ದೇಶದ ನಾನಾ ಭಾಗಗಳಿಂದ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.
ಉತ್ತರ ಭಾರತ ದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯದ ಸಚಿವರು ಧರ್ಮ ಸಂಸದ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಾಧು ಸಂತರ  ಭೋಜನ ಉಪಹಾರಕ್ಕೆ  ಪ್ರತ್ಯೇಕ ಅನ್ನ ಛತ್ರ  ತೆರೆಯಲಾಗಿದೆ.108 ಮಂದಿ ಸ್ವಾಮೀಜಿಗಳು  ಹಾಗೂ 9 ಮಂದಿ ಮುಖ್ಯ ಅತಿಥಿಗಳು  ಕುಳಿತುಕೊಳ್ಳಲು  ವೇದಿಕೆ ಸಿದ್ಧವಾಗಿದೆ. ಉಜಿರೆ ಜನಾರ್ಧನ್ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭಗೊಳ್ಳಲಿದ್ದು, 5 ರಥಗಳಲ್ಲಿ  ಪ್ರಮುಖ ಸಾಧು ಸಂತರನ್ನು ಕರೆ ತರಲಾಗುವುದು. ರಾತ್ರಿ 8  ಧರ್ಮ ಸಂಸದ್ ನಿರ್ಣಯಗಳನ್ನು  ಸಂತ ಶ್ರೇಷ್ಠರು ಕೈಗೊಳ್ಳಲಿದ್ದಾರೆ ಎಂದು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ  ಸರಸ್ವತಿ  ಸ್ವಾಮೀಜಿ ತಿಳಿಸಿದರು.

ಧರ್ಮ ಸಂಸದ್ ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.  ಸಾಧು ಸಂತರಿಂದ  ದಿವ್ಯ ಸಂದೇಶ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿರ್ಮಲಾ ಸೀತರಾಮನ್‌ ಉತ್ತಮ ಕಥೆಗಾರ್ತಿ: ಜಯಾ ಬಚ್ಚನ್ ಟೀಕೆ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಕೊನೆಗೂ ಖಾಕಿ ಕೈಗೆ ಸಿಕ್ಕಿಬಿದ್ದ ಬೈರತಿ ಬಸವರಾಜ್, ಲಾಕ್ ಆಗಿದ್ದು ಎಲ್ಲಿ ಗೊತ್ತಾ

ಭಾರತಕ್ಕೆ ವಾಪಾಸ್‌ ಬಂದ್ರೆ ಅಷ್ಟೆ, ವಿಜಯ್ ಮಲ್ಯಗೆ ಹೈಕೋರ್ಟ್ ಚಾಟಿ

ವಿಡಿಯೋ ಹೆಚ್ಚು ವೀಕ್ಷಣೆ ಪಡೆಯಲು ಮಾಡಿದ ಯಡವಟ್ಟಿಗೆ ಫುಡ್ ವ್ಲೋಗರ್‌, ಏನಾಯಿತು

ಆದಾಯಕ್ಕಿಂತ ಹೆಚ್ಚು ಆಸ್ತಿ, ಶೋಧಕ್ಕೆ ಹೋದ ಲೋಕಾಯುಕ್ತ ಖಾಕಿ ಫುಲ್ ಶಾಕ್

ಮುಂದಿನ ಸುದ್ದಿ
Show comments