Publish Date: Mon, 23 Oct 2023 (11:26 IST)
Updated Date: Mon, 23 Oct 2023 (08:45 IST)
ಮೈಸೂರು: ನಾಡಹಬ್ಬ ದಸರಾ ಮೈಸೂರು ಅರಮನೆಯಲ್ಲಿ ವಿಜೃಂಬಣೆಯಿಂದ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ಇಂದು ಆಯುಧ ಪೂಜೆ ನೆರವೇರಿದೆ.
ಇಂದೂ ಕೂಡಾ ನಸುಕಿನಿಂದಲೇ ಪೂಜಾ ಕಂಕರ್ಯಗಳು ಆರಂಭವಾಗಿದೆ. ಇಂದು ಅರಮನೆಯ ಶಸ್ತ್ರಾಸ್ತ್ರಗಳಿಗೆ ಆಯು ಧಪೂಜೆ ನೆರವೇರಿಸಲಾಗುತ್ತಿದೆ. ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿದೆ.
ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯನ್ನು ಇರಿಸಿ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕಂಕರ್ಯಗಳನ್ನು ನೆರವೇರಿಸಿದ್ದಾರೆ.