ಲೋಡ್ ಲೋಡ್ ಮೇವು ತಂದೋರಾರು: ಮಾದರಿಯಾದ ಜನರು

Webdunia
ಮಂಗಳವಾರ, 20 ಆಗಸ್ಟ್ 2019 (19:14 IST)
ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಿಗಡಾಯಿಸಿದೆ.

ಎಲ್ಲಾ ದಾನಿಗಳು ಜನರಿಗೆ ಆಹಾರ ಹಾಗೂ ದಿನನಿತ್ಯದ ವಸ್ತುಗಳನ್ನು ನೀಡುತ್ತಿದ್ದಾರೆ. ಆದರೆ ಅಲ್ಲಿನ ಜಾನುವಾರುಗಳು  ಆಹಾರವಿಲ್ಲದೆ ನಲುಗಿವೆ. ಈ ಜಾನುವಾರುಗಳಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮಸ್ಥರು 11 ಲೋಡ್ ಮೇವನ್ನು ಹೊತ್ತು ಉತ್ತರ ಕರ್ನಾಟಕ ಭಾಗಕ್ಕೆ ತೆರಳಿದ್ದಾರೆ.

ಪ್ರವಾಹದಿಂದ ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ನಲುಗಿದ್ದು, ಇಲ್ಲಿನ ಜನ ಊಟಕ್ಕೂ ಹರಸಾಹಸ ಪಡುವಂತಾಗಿದೆ. ಇನ್ನೂ ಇಲ್ಲಿನ ಜಮೀನು ಇನ್ನಿತರೆ ಮೇವು ಬೆಳೆಯುವ ಜಾಗಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.  ಈ ಹಿನ್ನಲೆ ಜಾನುವಾರುಗಳಿಗೆ ಮೇವು ಸಿಗದಂತಾಗಿದ್ದು, ಮೇವಿಗೆ ಬೇಡಿಕೆ ಹೆಚ್ಚಿದೆ.

ಈ ಭಾಗದಲ್ಲಿ ಪ್ರವಾಹದಿಂದ ಜಾನುವಾರುಗಳಿಗೂ ಸಹ ಆಹಾರವಿಲ್ಲದಂತಾಗಿವೆ. ಈ ವಿಷಯವನ್ನರಿತ ಜಿಗಳಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರ ತಂಡ ಮೇವನ್ನು ಕಳುಹಿಸಲು ಮುಂದಾಗಿ ಮೂರು ದಿನಕ್ಕೆ ಬರೋಬ್ಬರಿ 11 ಲೋಡ್ ಹುಲ್ಲನ್ನು ಸಂಗ್ರಹಿಸಿದ್ದಾರೆ. ಪ್ರತಿ ರೈತರ ಮನೆಗೆ ತೆರಳಿದ ಯುವಕರ ಗುಂಪು ಮೇವನ್ನು ಸಂಗ್ರಹ ಮಾಡಿದೆ.

ಇನ್ನೂ ಈ ಯುವಕರ ತಂಡಕ್ಕೆ ರೈತರು, ಗ್ರಾಮಸ್ಥರು ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಮೇವು ತುಂಬಿದ್ದ 11 ಟ್ರ್ಯಾಕ್ಟರ್ ಗಳಿಗೆ ಬಾಳೆ ಕಂಬ ಕಟ್ಟಿ ಪೂಜೆ ಸಲ್ಲಿಸಿ ಬಳಿಕ ಉತ್ತರ ಕರ್ನಾಟಕದ ಬಾದಾಮಿ ತಾಲ್ಲೂಕಿನ ಶಿವಯೋಗಿ ಮಂದಿರ ಸೇರಿದಂತೆ ವಿವಿಧ ಹಳ್ಳಿಗಳಿಗೆ ಮೇವು ನೀಡಲು ಹೊರಟರು.

 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಇಂದು ಭಾರೀ ಮಳೆ ಸಂಭವ

ಅಡ್ಡಮತದಾನ ಮಾಡಿದವರ ವಿರುದ್ಧ ಕೇಂದ್ರ ನಾಯಕರು ಶೀಘ್ರ ಕ್ರಮ ಕೈಗೊಳ್ತಾರೆ: ಛಲವಾದಿ ನಾರಾಯಣಸ್ವಾಮಿ

ಮುಂಬೈ ಲೋಕಲ್ ಟ್ರೈನ್ ನಲ್ಲಿ ಬಾಗಿಲು ಮುಚ್ಚುವ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ: ಭೀಕರ Video

ಕೇತನ್ ಅಗರ್ವಾಲ್ ಹತ್ಯೆ ಮಾಡುವ ಕೆಲವೇ ಗಂಟೆ ಮುಂಚೆ ಸಿಯಾ ಮಾಡಿದ ಕೆಲಸವೇನು ಗೊತ್ತಾ: ಶಾಕಿಂಗ್

ಪೆರಿಯಾರ್ ಹೇಳಿದ್ದನ್ನೆಲ್ಲಾ ನಾವು ಒಪ್ಪಲ್ಲ, ನಮಗೆ ದೇವರ ಮೇಲೆ ನಂಬಿಕೆಯಿದೆ ಎಂದ ಸಿಎಂ ವಿಜಯ್

ಮುಂದಿನ ಸುದ್ದಿ
Show comments