Publish Date: Sun, 27 Jan 2019 (15:19 IST)
Updated Date: Sun, 27 Jan 2019 (15:21 IST)
ಭತ್ತದ ಹೊಟ್ಟು ತುಂಬಿದ ಲಾರಿ ಅಪಘಾತವಾಗಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಲಾರಿ ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುವನ್ನು ಕಬ್ಬಹಳ್ಳಿಯ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಲಾರಿ ಓವರ್ ಲೋಡ್ ಹಾಕಿದ್ದರಿಂದ ತಿರುಗಿಸುವ ಸಂದರ್ಭದಲ್ಲಿ ಮಗುಚಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Jagadeesh
Publish Date: Sun, 27 Jan 2019 (15:19 IST)
Updated Date: Sun, 27 Jan 2019 (15:21 IST)