Publish Date: Fri, 10 Jan 2020 (15:24 IST)
Updated Date: Fri, 10 Jan 2020 (15:26 IST)
ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾರೀ ಡಿಮ್ಯಾಂಡ್ ಮಾಡಿದ್ದಾರೆ.
ಮಂಗಳೂರಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್ ಕೇಸ್ ನ್ನು ಸದನ ಸಮಿತಿ ರಚನೆ ಮಾಡೋ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಮಂಗಳೂರು ಗೋಲಿಬಾರ್ ಘಟನೆ ಕುರಿತು ಸಿಡಿ ಬಿಡುಗಡೆಗೊಳಿಸಿದ ಕುಮಾರಸ್ವಾಮಿ, ಘಟನೆಯ ಸತ್ಯ ತಿಳಿಯಲು ಸದನ ಸಮಿತಿ ರಚನೆ ಮಾಡಲೇಬೇಕು ಅಂತ ಒತ್ತಾಯ ಮಾಡಿದ್ದಾರೆ.
ಮ್ಯಾಜಿಸ್ಟ್ರೇಟ್ ಆಗಿರೋ ಜಿಲ್ಲಾಧಿಕಾರಿ, ಸಿಐಡಿಯವರು ಸರಕಾರದ ನಿರ್ದೇಶನದಂತೆ ಹಾಗೂ ಆದೇಶದಂತೆ ವರದಿ ನೀಡಲಿದ್ದಾರೆ. ಎಲ್ಲ ತನಿಖೆಗಳನ್ನು ಕೈಬಿಟ್ಟು ಸದನ ಸಮಿತಿ ರಚನೆ ಮಾಡಬೇಕೆಂದಿದ್ದಾರೆ.