Publish Date: Sat, 29 Oct 2022 (17:48 IST)
Updated Date: Sat, 29 Oct 2022 (17:51 IST)
ಗಣಿನಾಡು ಬಳ್ಳಾರಿಯಲ್ಲಿ ಅಕ್ರಮ ಪಡಿತರ ದಂಧೆ ನಿಲ್ಲುತ್ತಿಲ್ಲ. ಅಕ್ರಮ ಪಡಿತರ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಬಳ್ಳಾರಿ ಜಲ್ಲೆಯ ವಕ್ರಾಣಿ ಕ್ಯಾಂಪ್ ಬಳಿ ಕಾಳದಂಧೆಕೋರರ ವಿರುದ್ಧ ಪೊಲೀಸರು ದಾಳಿ ನಡೆಸಿದ್ದಾರೆ. ಪಡಿತರ ಅಕ್ಕಿ ಲೋಡ್ ಮಾಡುವಾಗ ಗ್ರಾಮೀಣ ಠಾಣೆಯ ಪೊಲೀಸರ ದಾಳಿ ನಡೆಸಿದ್ದಾರೆ. ಆರೋಪಿಗಳಿಂದ 200 ಕ್ವಿಂಟಾಲ್ಗೂ ಅಧಿಕ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಸ್ಥಳೀಯವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ದಂಧೆಕೋರರು ಬೇರೆಡೆ ಸಾಗಿಸುತ್ತಿದ್ದರು. ಸದ್ಯ ಅಕ್ರಮ ಪಡಿತರ ಸಾಗಿಸುತ್ತಿದ್ದ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕಾಳದಂಧೆಕೋರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
geetha
Publish Date: Sat, 29 Oct 2022 (17:48 IST)
Updated Date: Sat, 29 Oct 2022 (17:51 IST)