Daily Horoscope

Select Your Language

Notifications

webdunia
webdunia
webdunia
webdunia

ಎಸ್ಐಆರ್ ನಲ್ಲಿ ಹೆಸರು ಡಿಲೀಟ್ ಆಗಿದ್ದಕ್ಕೆ ಸಚಿವರ ಮೇಲೆ ಸಿಟ್ಟಾದ ಕೆಸಿ ವೇಣುಗೋಪಾಲ್ ಹೇಳಿದ್ದೇನು

KC Venugopal
ಬೆಂಗಳೂರು: ಎಸ್ಐಆರ್ ಪ್ರಕ್ರಿಯೆ ವೇಳೆ ಡಿಲೀಟ್ ಆಗಿದ್ದ ವೋಟ್ ನಮ್ಮ ವೋಟ್ ಅಲ್ಲ ಎಂದು ಸಚಿವರು ಸಮಜಾಯಿಷಿ ಕೊಟ್ಟಾದ ಎಐಸಿಸಿ ನಾಯಕ ಕೆಸಿ ವೇಣುಗೋಪಾಲ್ ಸಿಟ್ಟಾದ ಘಟನೆ ನಡೆದಿದೆ.

ನಿನ್ನೆಯಿಂದ ಕಾಂಗ್ರೆಸ್ ನಾಯಕರ ಜೊತೆ ಕೆಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆ ವಿಚಾರವೂ ಚರ್ಚೆಯಾಗಿದೆ.

ಎಸ್ಐಆರ್ ನಲ್ಲಿ 1 ಕೋಟಿ ಗೂ ಅಧಿಕ ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ಚರ್ಚೆಯಾಗಿದೆ. ಈ ವೇಳೆ ಇಷ್ಟೊಂದು ಮತದಾರರ ಹೆಸರು ಡಿಲೀಟ್ ಆಗಿರುವಾಗ ನಿರ್ಲ್ಯಕ್ಷ್ಯ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಈ ವೇಳೆ ಸಚಿವರು ಡಿಲೀಟ್ ಆಗಿರುವುದು ನಮ್ಮ ಮತಗಳಲ್ಲ ಎಂದು ಸಮಜಾಯಿಷಿ ಕೊಡಲು ಮುಂದಾದಾಗ ಸಿಟ್ಟಾದ ಕೆಸಿ ವೇಣುಗೋಪಾಲ್ ಮೊದಲು ಡಿಲೀಟ್ ಆದ ಹೆಸರುಗಳು ಸೇರ್ಪಡೆಯಾಗುವಂತೆ ನೋಡಿಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ.

ಇನ್ನು ಪತ್ರಿಕಾಗೋಷ್ಠಿಯಲ್ಲೂ ಕೆಸಿ ವೇಣುಗೋಪಾಲ್ ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಎಸ್ಐಆರ್ ಹೆಚ್ಚು ನ್ಯಾಯಸಮ್ಮತ, ಮುಕ್ತವಾಗಿರಬೇಕು. ಎಸ್ಐಆರ್ ಬಗ್ಗೆ ಸಾಕಷ್ಟು ಆರೋಪಗಳಿವೆ. ಈ ದೇಶದಲ್ಲಿ ಮತಗಳ್ಳತನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿರುವುದೇನೂ ಇಲ್ಲ. ಜಾಗೃತಿ ಮೂಡಿಸಲು ನಮ್ಮ ಸಚಿವರು, ಶಾಸಕರಿಗೆ ಹೇಳಿದ್ದೇನೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳತನ ಮಾಡಲು ಬಂದ ಭೂಪ ಗ್ರಿಲ್ ಮಧ್ಯೆ ಸಿಲುಕಿಕೊಂಡ, ನಂತರ ನಡೆದಿದ್ದೇನು ನೋಡಿ video