Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಇಂದು ಕರ್ನಾಟಕಕ್ಕೆ ಮತ್ತೊಂದು ಸರ್ಕಾರ ಬರಲು ಜನರು ತಮ್ಮ ಅಧಿಕಾರ ಚಲಾಯಿಸುವ ಮಹತ್ವದ ದಿನ. ಜನಸಾಮಾನ್ಯರ ಪರಮಾಧಿಕಾರ ಚಲಾಯಿಸಲು ಇಂದು ಸರಿಯಾದ ದಿನ.
ಹಾಗಾಗಿ ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಯವಾಗಿ ನಿಮ್ಮ ಮತ ಚಲಾಯಿಸಿ, ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ.
ಈ ಬಾರಿ ವಿದ್ಯುನ್ಮಾನ ಯಂತ್ರದಲ್ಲಿ ನೀವು ಮಾಡಿದ ಮತ ನೀವು ಬಯಸಿದ ಅಭ್ಯರ್ಥಿಗೇ ಚಲಾವಣೆಯಾಗಿದೆಯೇ ಎಂದು ನೋಡಲು ವಿವಿ ಪ್ಯಾಟ್ ಬಳಸಲಾಗುತ್ತಿದೆ. ಅದಕ್ಕಾಗಿ ನಿಮ್ಮ ಮತ ಚಲಾಯಿಸಿದ ಮೇಲೆ 10 ಸೆಕೆಂಡುಗಳ ಕಾಲ ಅಲ್ಲಿಯೇ ನಿಂತು ಖಾತ್ರಿ ಪಡಿಸಿದರೆ ಸಾಕು. ನಿಮ್ಮ ಅಮೂಲ್ಯ ಮತ ಹಾಳು ಮಾಡಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.