ಕರ್ನಾಟಕ ಜಾತಿ ಗಣತಿಯಲ್ಲಿ ಎಲ್ಲವೂ ಅಯೋಮಯ: ಮೊದಲ ದಿನವೇ ಅಧಿಕಾರಿಗಳಿಗೆ ತಲೆನೋವು

Krishnaveni K
ಮಂಗಳವಾರ, 23 ಸೆಪ್ಟಂಬರ್ 2025 (09:38 IST)
Photo Credit: AI Image
ಬೆಂಗಳೂರು: ಕರ್ನಾಟಕ ಜಾತಿ ಗಣತಿಯಲ್ಲಿ ನಿನ್ನೆ ಮೊದಲ ದಿನವೇ ಅಧಿಕಾರಿಗಳು ಸಾಕಷ್ಟು ಸಮಸ್ಯೆ ಎದುರಿಸಿದ್ದು, ಸೂಕ್ತ ವ್ಯವಸ್ಥೆಯಿಲ್ಲದೇ ಗಣತಿಗೆ ಇಳಿದು ಅಯೋಮಯವಾಗುವಂತೆ ಆಗಿದೆ.

ಜಾತಿ ಗಣತಿ ತರಾತುರಿಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಸರ್ಕಾರ ನಿನ್ನೆಯಿಂದಲೇ ಹಠಕ್ಕೆ ಬಿದ್ದು ಗಣತಿ ಆರಂಭಿಸಿದೆ. ಬೆಸ್ಕಾಂ ಅಧಿಕಾರಿಗಳಿಂದಲೂ ಗಣತಿ ಮಾಡಿಸುತ್ತಿದೆ. ಆದರೆ ಮೊದಲ ದಿನವೇ ಸಾಕಷ್ಟು ವಿಘ್ನಗಳು ಎದುರಾಗಿವೆ.

ಮೊದಲ ದಿನವೇ ಗಣತಿದಾರರಿಗೆ ಕಿಟ್ ಸಿಕ್ಕಿರಲಿಲ್ಲ. ಕಿಟ್ ಸಿಕ್ಕವರಿಗೆ ಸರ್ವರ್ ಸಮಸ್ಯೆ, ಕೆಲವರಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಾಗಿದೆ. ಇದರಿಂದಾಗಿ ನಿರೀಕ್ಷಿಸಿದಷ್ಟು ಕುಟುಂಬಗಳ ಗಣತಿ ನಿನ್ನೆ ಸಾಧ್ಯವಾಗಿಲ್ಲ.

ಮೊದಲ ದಿನ ಕೇವಲ 10,000 ಗಣತಿ ನಡೆದಿರಬಹುದಷ್ಟೇ ಎಂದು ಅಂದಾಜಿಸಲಾಗಿದೆ. ಗಣತಿದಾರರ ಮೊಬೈಲ್ ಗೆ ಅಪ್ಲಿಕೇಷನ್ ಗೆ ಲಾಗಿನ್ ಆಗಲು ಸಮಸ್ಯೆಗಳು ಎದುರಾದವು. ಇನ್ನು, ಸಿಬ್ಬಂದಿಗಳಲ್ಲೂ ಗೊಂದಲಗಳಿತ್ತು. ಸರಿಯಾದ ತರಬೇತಿ ಕೊರತೆಯಿಂದ ಅವರೂ ಗೊಂದಲಕ್ಕೀಡಾಗಿದ್ದರು. ಕಲಬುರಗಿ, ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಇದೀಗ ಗಣತಿ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಕೆಲವು ಕಡೆ ಇನ್ನೂ ಸಿಬ್ಬಂದಿಗಳಿಗೆ ತರಬೇತಿ ನೀಡಿಲ್ಲ. ಹೀಗಾಗಿ ಗಣತಿ ಕೂಡಾ ಆರಂಭವಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಏ17ಕ್ಕೆ ಶಿಕ್ಷೆ ಪ್ರಕಟ

ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗದಲ್ಲಿ ಅವಘಡ, ಮೂವರಿಗೆ ಗಾಯ

17ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಕ್ಕೆ 9 ಕಾರ್ಮಿಕರು ಸಾವು, ಹಲವು ಮಂದಿಗೆ ಗಾಯ

ಪಶು ವೈದ್ಯೆ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಮೃಗಾಲಯದ ಗರ್ಭಿಣಿ ನೀರಾನೆ ಸಾವು

ಮುಂದಿನ ಸುದ್ದಿ
Show comments