Publish Date: Fri, 21 Feb 2020 (20:12 IST)
Updated Date: Fri, 21 Feb 2020 (20:13 IST)
ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಸಭೆಯಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಹಿಂದೆ ಕಾಣದ ಕೈಗಳು ಆಟವಾಡುತ್ತಿವೆ.
ಅಮೂಲ್ಯ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚುವ ಮೂಲಕ ಅಮೂಲ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗಂತ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಹಲವು ವಿಶ್ವವಿದ್ಯಾಲಯಗಳಲ್ಲಿ ದೇಶದ್ರೋಹದ ಕೆಲಸಗಳು ನಡೆಯುತ್ತಿವೆ. ಈ ಜಾಲವನ್ನು ಪತ್ತೆ ಮಾಡಿ ಮುಂದೆ ಯಾರೋಬ್ಬರೂ ಈ ರೀತಿ ಮಾಡದಂತೆ ಕಠಿಣ ಶಿಕ್ಷೆ ವಿಧಿಸಬೇಕಿದೆ ಎಂದಿದ್ದಾರೆ.