Publish Date: Mon, 01 May 2023 (15:00 IST)
Updated Date: Mon, 01 May 2023 (14:30 IST)
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಚುನಾವಣಾ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ನಾರಾಯಣ ರಾಜು ಮತಯಾಚನೆ ಮಾಡಿದ್ದಾರೆ.ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ಮತಯಾಚನೆ ಮಾಡ್ತಿದ್ದಾರೆ.ಇಬ್ಬಲೂರಿನ ದೊಡ್ಡಮ್ಮ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.ಸ್ವತಃ ಬೈಕ್ ಚಲಾಯಿಸಿಕೊಂಡು ಅಭ್ಯ ರ್ಥಿ ನಾರಾಯಣ ರಾಜು ಬರುತ್ತಿದ್ದಾರೆ.ಅಗರ, ಹೆಚ್ ಎಸ್ ಆರ್ ಲೇಔಟ್, ಹೊಸಪಾಳ್ಯ, ಮಂಗಮ್ಮನಪಾಳ್ಯ, ಬೊಮ್ಮನಹಳ್ಳಿ, ಪುಟ್ಟೆನಹಳ್ಳಿ ಮೂಲಕ ಬೈಕ್ ರ್ಯಾಲಿ ಸಾಗಲಿದೆ.ಅಗರದ ಆಂಜನೇಯ ಸ್ವಾಮಿ ದೇವಾಲಯ ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕ್ಕೆ ಮಾಡಿ ಮತಯಾಚನೆ ಮಾಡ್ತಿದ್ದಾರೆ.