Webdunia - Bharat's app for daily news and videos

Install App

ಸಿದ್ಧಾರೂಢ ಮಠಕ್ಕೆ ಜನಾರ್ದನ ರೆಡ್ಡಿ ಭೇಟಿ

Webdunia
ಮಂಗಳವಾರ, 20 ಡಿಸೆಂಬರ್ 2022 (20:17 IST)
ಹುಬ್ಬಳ್ಳಿ ಗೆಳೆಯರು ನನ್ನ ಜೊತೆ ಬರ್ತಾರೆ ಅನ್ನೋದನ್ನ ಆ ದೇವರೇ ಬಲ್ಲ. ನನ್ನ ಮುಂದಿನ ನಡೆಯನ್ನ ಡಿಸೆಂಬರ್ 25 ರಂದು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನಿಗೂಢವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಸಿದ್ಧಾರೂಢ ಹಾಗೂ ಗಳಗನಾಥರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತಂಬೂರಿ ಹೆಗಲಿಗೆ ಹಾಕಿಕೊಂಡು ಸಿದ್ಧಾರೂಢರ ಆಶೀರ್ವಾದ ಪಡೆದರು. ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೇನೆ. ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದ್ದೆ. ನಾನೇ ಮಂಗಳಾರತಿ, ವಿಶೇಷ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು. ಸಿದ್ದಾರೂಢರ ಅಂಗಾರ ಜಗಕೆಲ್ಲಾ ಬಂಗಾರ ಎಂಬುದು ಜಗಜ್ಜಾಹೀರು. ನನ್ನ ಭವಿಷ್ಯದ ರಾಜಕೀಯ, ಖಾಸಗಿ ಜೀವನ ರೂಪಿಸಲು ಆಶೀರ್ವಾದ ಪಡೆಯಲು ಬಂದಿದ್ದೇನೆ. ಸಿದ್ದಾರೂಢರ ಜೋಳಿಗೆ ಜಗಕೆಲ್ಲಾ ಹೋಳಿಗೆ ಎಂಬ ವಾಣಿ ಇದೆ. ಸಿದ್ದಾರೂಢರ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ಕೊಡಲಿ ಅಂತ ಬೇಡಲು ಬಂದಿದ್ದೇನೆ. ಬರುವ ದಿನಗಳಲ್ಲಿ ಬದುಕಲು ಶ್ರೀಗಳ ಆಶೀರ್ವಾದ ಬೇಕು. ಸ್ವಾಮೀಜಿ ಮುಂದೆ ನಾನು ಬೇಡಿಕೊಂಡಿದ್ದನ್ನು ಈಗ ಹೇಳಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಬಹಿರಂಗಪಡಿಸ್ತೇನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments