Webdunia - Bharat's app for daily news and videos

Install App

ಸಾಗರ್ ಖಂಡ್ರೆ ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ: ಬಿಜೆಪಿಗರ ಪ್ರಶ್ನೆ

Sampriya
ಮಂಗಳವಾರ, 16 ಏಪ್ರಿಲ್ 2024 (16:24 IST)
Photo Courtesy X
ಬೆಂಗಳೂರು:  ಅತ್ಯಂತ ಕಿರಿಯ ವಯಸ್ಸಿನಲ್ಲಿ ಲೋಕಸಭಾ ಚುನಾವಣೆಗೆ ಧುಮುಕಿರುವ ಸಚಿವ ಈಶ್ವರ ಬಿ ಖಂಡ್ರೆಯವರ ಮಗ ಯುವ ನಾಯಕ ಸಾಂಗರ್ ಖಂಡ್ರೆ ಅವರು ಬಾಲ ಅಭ್ಯರ್ಥಿ ಎಂದು ಬಿಜೆಪಿ ಬೆಂಬಲಿಗರು ಲೇವಾಡಿ ಮಾಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕೈಗೊಂಡ ಸಾಗರ್ ಖಂಡ್ರೆ ಅವರ ಭಾಷಣದ ತುಣುಕನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಡಿಯರ್‌ @INCKarnataka
, ನಿಮ್ಮ @INCIndia
 ದ ಬಾಲ ಅಭ್ಯರ್ಥಿ @SagarKhandre12
 ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ?

ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು?

ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ ಕೆಲಸನಾ?

ಈ ಹಿಂದೆ ಸಾಗರ್ ಖಂಡ್ರೆಗೆ  ವಯಸ್ಸು ಚಿಕ್ಕಿದು, ಅನುಭವ ಇಲ್ಲ ಎಂದವರಿಗೆ ಕೌಂಟರ್ ಕೊಟ್ಟ ಸಾಗರ್, ಸವಿರೋಧಿಗಳು ನನ್ನ ವಯಸ್ಸು ಚಿಕ್ಕದು, ಅನುಭವ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ, ನಾನು ಬಿಬಿಎ, ಎಲ್ಎಲ್​ಬಿ ಐದು ವರ್ಷದ ಕೋರ್ಸ್ ಮುಗಿಸಿದ್ದೇನೆ. ಸುಪ್ರೀಂಕೋರ್ಟ್‌ನಲ್ಲಿ ಕೆಲಸ ಮಾಡಿದ್ದೇನೆ. ಲಾಯರ್​, ಜಡ್ಜ್ ಕೈಕೆಳಗೆ ಕೆಲಸ ಮಾಡಿದ‌ ಅನುಭವವಿದೆ. ನನಗೆಕಾನೂನು ಜ್ಞಾನ ಇದೆ, ಬೇಕಾದರೆ ಚರ್ಚೆಗೆ ಬನ್ನಿ ಯಾರಿಗೆ ಎಷ್ಟು ಜ್ಞಾನ ಇದೆ ಎಂದು ತಿಳಿಯುತ್ತದೆ ಎಂದು ಸವಾಲ್ ಎಸೆದಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಮುಂದಿನ ಸುದ್ದಿ
Show comments