Publish Date: Tue, 07 May 2019 (21:06 IST)
Updated Date: Tue, 07 May 2019 (21:11 IST)
ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿನ ಮೂರ್ತಿ ತೆರವು ಈಗ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಮೂರ್ತಿ ತೆರವು ಮಾಡಿ ಬುದ್ಧನ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ವಿಚಾರ ಹಾಗೂ ಈ ಬಗ್ಗೆ ಡಿಜಿಗೆ ವರದಿ ಕೇಳಿದ್ದೇನೆ. ಹೀಗಂತ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಯಾವುದೇ ಮೂರ್ತಿ ತೆಗೆದು ಬೇರೆ ಮೂರ್ತಿ ಸ್ಥಾಪನೆ ಮಾಡೋದು ಸರಿಯಲ್ಲ. ಸರಸ್ವತಿ, ಬುದ್ಧ ಎಲ್ಲರ ಮೇಲು ಗೌರವ ಇದೆ.
ಹಾಗಂತ ಮೂರ್ತಿ ತೆಗೆದು ಹೊಸ ಮೂರ್ತಿ ಸ್ಥಾಪನೆ ಮಾಡೋದು ಸರಿಯಲ್ಲ ಎಂದರು. ಡಿಜಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಮೊದಲಿನಂತೆ ಪರಿಸ್ಥಿತಿ ಇರಲು ಸೂಚನೆ ನೀಡಿದ್ದೇನೆ ಅಂತ ಹೇಳಿದ್ದಾರೆ ಗೃಹ ಸಚಿವ ಎಂ.ಬಿ. ಪಾಟೀಲ್.