Publish Date: Wed, 04 Aug 2021 (18:18 IST)
Updated Date: Wed, 04 Aug 2021 (18:20 IST)
ಮಂಗಲವಾರ 29 ಸಚಿವರ ಪದಗ್ರಹಣ ನಂತರ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಚಿವರಿಗೆ ನಾಳೆಯೇ ಜಿಲ್ಲೆಗಳಿಗೆ ತೆರಳಿ ಕೋವಿಡ್ ಹಾಗೂ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಕೋವಿಡ್ ಟಾಸ್ಕ್ ಫೋರ್ಸ್ ಪುನರಚನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಡಿಸಿಎಂ ಸ್ಥಾನಗಳಿಗೆ ಕೊಕ್ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಾಮಾನ್ಯವಾಗಿ ಸಚಿವ ಸಂಪುಟ ಪುನಾರಚನೆ ಒಂದರಿಂದ ಮೂರು ವಾರ ಆಗೋದು ಸಾಮಾನ್ಯ. ಆದರೆ ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ.
ನಾನು ಎರಡು ದಿನಗಳ ಪ್ರವಾಹ ಪ್ರವಾಸದಲ್ಲಿದ್ದೆ. ಅಲ್ಲದೇ ಎರಡು ದಿನಗಳ ಕಾಲ ದೆಹಲಿಯದ್ದು ಸಚಿವ ಸಂಪುಟ ರಚನೆ ಅನುಮತಿ ಪಡೆದುಕೊಂಡು ಬಂದಿದ್ದೇನೆ. ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ. ಖಾತೆ ಹಂಚಿಕೆ ಮಾಡೋದು ನಾನೇ ಎಂದರು.