Publish Date: Wed, 23 Feb 2022 (10:22 IST)
Updated Date: Wed, 23 Feb 2022 (10:31 IST)
ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ವ್ಯಕ್ತಿ ಆಕೆ ಹಾಗೂ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ದಂಪತಿಗೆ ಇಬ್ಬರು ಮಕ್ಕಳಿದ್ದರು. ಹಾಗಿದ್ದರೂ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಈಕೆಯ ವರ್ತನೆಯಿಂದ ಬೇಸತ್ತ ಪತಿ ಎಷ್ಟೋ ಬಾರಿ ಬುದ್ಧಿ ಹೇಳಿಯೂ ಪ್ರಯೋಜನವಾದಾಗ ಮನೆ ಬದಲಾಯಿಸಿದ್ದ. ಆದರೆ ಆಗಲೂ ಆಕೆ ಹಳೇ ಚಾಳಿ ಮುಂದುವರಿಸಿದಾಗ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದು ಪತ್ನಿ ಹಾಗೂ ಆಕೆಯ ತಾಯಿಯೊಂದಿಗೆ ಜಗಳವಾಡಿದ್ದಾನೆ.
ಬಳಿಕ ಅದೇ ಸಿಟ್ಟಿನಲ್ಲಿ ಇಬ್ಬರನ್ನೂ ಮಚ್ಚಿನಿಂದ ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗತಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.