ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐಟಿ ತನಿಖೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ವಿವರ ಇಲ್ಲಿದೆ

Krishnaveni K
ಗುರುವಾರ, 2 ಮೇ 2024 (09:09 IST)
Photo Courtesy: facebook
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐಟಿ ತನಿಖೆ ಹೇಗೆ ನಡೆಯಲಿದೆ ಎಂಬ ವಿವರ ಇಲ್ಲಿದೆ.

ಸದ್ಯಕ್ಕೆ ಎಸ್ಐಟಿ ತಂಡ ಮೂರು ತಂಡಗಳಾರಿ ವಿಭಜಿಸಲಾಗಿದೆ. ಈ ಮೂರೂ ತಂಡಗಳೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಒಂದು ತಂಡ ಸಂತ್ರಸ್ತ ಮಹಿಳೆಯರ ತನಿಖೆ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಗೆ ನೋಟಿಸ್ ನೀಡಲಾಗಿದೆ. ಆದರೆ ಅವರೀಗ ವಿದೇಶದಲ್ಲಿದ್ದು ಒಂದು ವಾರ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪಿಗೆ ಸಿಗುವ ಸಾಧ‍್ಯತೆ ಕಡಿಮೆ.

 
ಸಂತ್ರಸ್ತರನ್ನು ವಿಚಾರಣೆ ನಡೆಸುತ್ತಿರುವ ತಂಡವೂ ವಿಡಿಯೋದಲ್ಲಿರುವ ಮಹಿಳೆಯರಿಗೆ ವಿಚಾರಣೆಗೆ ಬರಲು ಮನವಿ ಮಾಡಿದ್ದಾರೆ. ಆದರೆ ಇವರಲ್ಲಿ ಬಹುತೇಕರು ವಿಚಾರಣೆಗೆ ಬರಲು ಒಪ್ಪಿಲ್ಲ. ಹೀಗಾಗಿ ನಿಯಮದ ಪ್ರಕಾರ ಎಸ್ಐಟಿಗೆ ದೂರುದಾರರನ್ನು ಹೊರತುಪಡಿಸಿ ಉಳಿದವರನ್ನು ವಿಚಾರಣೆಗೆ ಕರೆಸಲು ಬಲವಂತ ಮಾಡುವಂತಿಲ್ಲ.

ಪ್ರಜ್ವಲ್ ರೇವಣ್ಣರ  ವಿಡಿಯೋಗಳನ್ನು ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಬಹುದು. ಇದು ಪ್ರಮುಖ ವಿಚಾರವಾಗಿದೆ. ಒಂದು ವೇಳೆ ವಿಡಿಯೋ ನಕಲಿ ಎಂದು ಸಾಬೀತಾದರೆ ಪ್ರಕರಣ ಬಿದ್ದುಹೋಗಲಿದೆ. ಅಸಲಿ ಎಂದು ತಿಳಿದುಬಂದರೆ ಪ್ರಕರಣ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಒಂದು ವೇಳೆ ಅಸಲಿ ಎಂದು ಗೊತ್ತಾದರೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬಹುದು.

ಈ ಪ್ರಕರಣದಲ್ಲಿ ಸಂತ್ರಸ್ತರು ನೀಡುವ ಹೇಳಿಕೆಗಳೂ ಪ್ರಮುಖ ಸಾಕ್ಷಿಯಾಗುತ್ತವೆ. ಒಂದು ವೇಳೆ ಈ ವಿಡಿಯೋದಲ್ಲಿರುವ ಮಹಿಳೆಯರು ಸ್ವಯಂ ಒಪ್ಪಿಗೆಯಿಂದ ಈ ಕೆಲಸ ಮಾಡಿರುವುದಾಗಿ ಹೇಳಿದರೆ ಕೇಸ್ ಬಲಕಳೆದುಕೊಳ್ಳುತ್ತದೆ. ಆದರೆ ಯಾವುದೇ ಹೇಳಿಕೆ ನೀಡಲೂ ಅವರ ಮೇಲೆ ಯಾರೂ ಒತ್ತಡ ಹಾಕುವಂತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರಿನಲ್ಲಿ ಹಾಡಹಗಲು ಸಾರ್ವಜನಿಕವಾಗಿ ಹುಡುಗಿಯನ್ನು ಕೊಂದ ಮಾಜಿ ಲವ್ವರ್: ಭೀಕರ ವಿಡಿಯೋ ವೈರಲ್ Video

Karnataka Weather: ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳಲ್ಲಿ ಹವಾಮಾನ ಬದಲಾವಣೆ ಗಮನಿಸಿ

ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ವೈಯಕ್ತಿಕ ಹಕ್ಕು: ಕೇರಳ ಸಿಎಂ ವಿಡಿ ಸತೀಶನ್

ಜುಲೈ 17 ರಂದು ಹರಿಯಾಣದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಮೋದಿ ಚಾಲನೆ

ಮೈಸೂರು ದಸರಾದಲ್ಲಿ ಕಂಬಳ ನಡೆಯುವುದರ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಅಶೋಕ್ ರೈ

ಮುಂದಿನ ಸುದ್ದಿ