ಮುಂದಿನ ಒಂದು ವಾರ ಇನ್ನಷ್ಟು ಉರಿಬಿಸಿಲು ಎದುರಿಸಲು ಸಿದ್ಧರಾಗಿ

Krishnaveni K
ಬುಧವಾರ, 1 ಮೇ 2024 (07:00 IST)
ಬೆಂಗಳೂರು: ಈಗಾಗಲೇ ಬಿರು ಬಿಸಿಲಿನಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಸದ್ಯಕ್ಕಂತೂ ಮಳೆಯ ಸೂಚನೆಯಿಲ್ಲ. ಬದಲಾಗಿ ಇನ್ನೂ ಒಂದು ವಾರ ಕಾಲ ಮತ್ತಷ್ಟು ಉರಿಬಿಸಿಲು ಎದುರಿಸಲು ಸಿದ್ಧರಾಗಬೇಕಿದೆ.

ತಾಪಮಾನ ಮುಂದಿನ ನಾಲ್ಕು ದಿನಗಳಲ್ಲಿ 40 ಡಿಗ್ರಿವರೆಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೀಗ 33 ರಿಂದ 35 ರವರೆಗೂ ತಾಪಮಾನ ಏರಿಕೆಯಾಗಿದೆ. ಹಗಲು ಹೊತ್ತು ಹೊರಗೆ ಕಾಲಿಡಲೂ ಆಗದಂತಹ ಸುಡು ಬಿಸಿಲಿನ ವಾತಾವರಣವಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬೇಸಿಗೆಗಾಲದಲ್ಲೂ ರಾತ್ರಿ ವೇಳೆ ವಾತಾವರಣ ತಂಪಾಗಿಯೇ ಇರುತ್ತದೆ. ಆದರೆ ಈ ಬಾರಿ ಹಗಲು-ಇರುಳೆನ್ನದೇ ತಾಪಮಾನ ತಾರಕಕ್ಕೇರಿದೆ. ಹೈದರಾಬಾದ್, ಚೆನ್ನೈ ನಗರಗಳಂತೇ ಬೆಂಗಳೂರಿನಲ್ಲೂ ಬಿಸಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

ಮೇ 5 ರವರೆಗೂ ಈ ತಾಪಮಾನ ಮುಂದುವರಿಯಲಿದೆ. ಮೊನ್ನೆಯಷ್ಟೇ ಬೆಳಗಾವಿ ಸೇರಿದಂತೆ ಕೆಲವೆಡೆ ಸಣ್ಣ ಮಳೆಯಾಗಿತ್ತು. ಅದು ಬಿಟ್ಟರೆ ಮೋಡದ ಸುಳಿವೂ ಇಲ್ಲ. ಈಗಾಗಲೇ ಮೇ ಆರಂಭವಾಗಿದ್ದು, ಇನ್ನೂ ಹದಿನೈದು ದಿನಗಳಲ್ಲಿ ಮಳೆ ಬಾರದೇ ಹೋದರೆ ಇಡೀ ದೇಶದ ಪರಿಸ್ಥಿತಿ ಹೇಳತೀರದಂತಾಗಲಿದೆ. ಈಗಾಗಲೇ ಜನ ಕುಡಿಯುವ ನೀರಿಗೂ ತೊಂದರೆ ಎದುರಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಹಲವು ರೋಗಗಳ ಭಯ ಶುರುವಾಗಿದೆ. ಈ ಬಾರಿಯಾದರೂ ವಾಡಿಕೆಯಂತೆ ಮಳೆಯಾದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಏರಿದ ಸಚಿವ ಬೈರತಿ ಸುರೇಶ್: ಚಿಲ್ರೆ ಇಲ್ಲ ಎಂದರೆ ಸಚಿವರನ್ನೇ ಬಸ್ ನಿಂದ ಕೆಳಿಗಿಳಿಸೋದಾ Video

Video: ಹೀಗಾದ್ರೆ ಡೆಲಿವರಿ ಬಾಯ್ಸ್‌ಗೆ ಡೋರ್ ಓಪನ್ ಮಾಡುವುದು ಹೇಗೆ, ತನಗಾದ ಕೆಟ್ಟ ಅನುಭವ ಬಿಚ್ಚಿಟ್ಟ ಯುವತಿ

Karnataka Weather: ನಿರಂತರ ಮಳೆಯಾಗಿರುವ ಕರಾವಳಿ ಭಾಗದಲ್ಲಿ ಇಂದು ಹೇಗಿರಲಿದೆ ಗೊತ್ತಾ ಹವಾಮಾನ

ಎಸ್‌ ಜಾನಕಿ ಪ್ರತಿ ಮಲಯಾಳಿ ಮನೆಯ ಸದಸ್ಯರಾಗಿದ್ದಾರೆ: ಕೇರಳ ಸಿಎಂ ವಿಡಿ ಸತೀಶನ್‌

ಆದಾಯಕ್ಕಿಂತ ಹೆಚ್ಚು ಆಸ್ತಿ, ಜಮೀರ್ ಅಹ್ಮದ್‌ಗೆ ಹೊಸ ಸಂಕಷ್ಟ

ಮುಂದಿನ ಸುದ್ದಿ
Show comments