Publish Date: Sun, 11 Jun 2023 (15:00 IST)
Updated Date: Sun, 11 Jun 2023 (17:32 IST)
ಬೆಳಗಾವಿಯಲ್ಲಿ APMC ಮಾರುಕಟ್ಟೆಗೆ ಒಳ್ಳೆಯದಾಗಲಿ ಎಂದು ವರ್ತಕರು ಹೋಮ ಹವನ ಮಾಡಿದ್ದಾರೆ.ಬೆಳಗಾವಿ ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪನೆಯಿಂದ APMC ವರ್ತಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು,APMC ಮಾರುಕಟ್ಟೆಗೆ ಒಳ್ಳೆಯದಾಗಲಿ ಎಂದು ಗಣಹೋಮ, ನವಗ್ರಹ ಶಾಂತಿ ಮಾಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಗೆ ಅನುಮತಿ ನೀಡಲಾಗಿತ್ತು. ಇದರಿಂದ ಎಪಿಎಂಸಿ ಮಾರುಕಟ್ಟೆ ಬಂದ್ ಆಗೋ ಸ್ಥಿತಿಗೆ ತಲುಪಿದ್ದು, ಕಾಂಗ್ರೆಸ್ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ವರ್ತಕರು ಮನವಿ ಮಾಡಿದ್ದಾರೆ.