Select Your Language

Notifications

webdunia
webdunia
webdunia
webdunia

ಸಿಖ್ಖರಿಗೆ ಭಯವಿದೆ ಅಂತೀರಲ್ಲ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಹಿಂದೂಗಳಿಗೆ ಭಯವಿದೆ ಎಂದ ನೆಟ್ಟಿಗರು

Ganesha Idol arrest

Krishnaveni K

ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2024 (14:00 IST)
Photo Credit: X
ಬೆಂಗಳೂರು: ಹಿಂದೂಗಳ ಆರಾಧ್ಯ ದೈವ ಗಣೇಶನ ಮೂರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿ ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ಯುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ನಡೆದ ಕೋಮುಗಲಭೆಯಲ್ಲಿ ಗಣೇಶನ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೊದಲು ಸುದ್ದಿಯಾಗಿತ್ತು. ಆದರೆ ಇದು ಮಂಡ್ಯದ ಗಣೇಶನ ಮೂರ್ತಿಯಲ್ಲ. ಬೆಂಗಳೂರಿನಲ್ಲಿ ಗಣೇಶನ ಮೂರ್ತಿಯನ್ನಿಟ್ಟುಕೊಂಡು ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಮೂರ್ತಿಯನ್ನೇ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದರು.

ಈ ಫೋಟೋಗಳನ್ನು ನೋಡಿ ನೆಟ್ಟಿಗರು ಇದು ಬೆಂಗಳೂರಾ, ಬಾಂಗ್ಲಾದೇಶವಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ರಾಹುಲ್ ಗಾಂಧಿಯವರು ಅಮೆರಿಕಾದಲ್ಲಿ ಭಾಷಣ ಮಾಡುವಾಗ ಭಾರತದಲ್ಲಿ ಈಗ ಸಿಖ್ಖರು ಪೇಟ, ಕಡಗ ತೊಟ್ಟುಕೊಂಡು ಹೋಗಲೂ ಭಯಪಡುವ ಸ್ಥಿತಿಯಿದೆ ಎಂದಿದ್ದರು.

ಆದರೆ ಕರ್ನಾಟಕದಲ್ಲಿ ಹಿಂದೂಗಳೇ ಗಣೇಶನ ಮೂರ್ತಿಯನ್ನು ಇಡಲು ಭಯಪಡುವ ಸ್ಥಿತಿಯಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ ಗಣೇಶನ ಮೂರ್ತಿಯನ್ನೇ ಪೊಲೀಸರು ಅರೆಸ್ಟ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನಡುವೆ ಗಲಭೆಪೀಡಿತವಾಗಿದ್ದ ನಾಗಮಂಗಲದಲ್ಲಿ ಇದೀಗ ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಸೂರಜ್ ಮನೆಯ ಕೆಲಸದಾಕೆಯನ್ನೂ ಬಿಟ್ಟಿರಲಿಲ್ಲ ಪ್ರಜ್ವಲ್ ರೇವಣ್ಣ: ಇವನೆಂಥಾ ಕಾಮುಕ