Webdunia - Bharat's app for daily news and videos

Install App

ಕೋಳಿ ಉತ್ಪಾದನೆ ಮೇಲೆ ಉರಿ ಬಿಸಿಲ ಹೊಡೆತ, 300 ದಾಟಿದ ಕೋಳಿ ಮಾಂಸದ ಬೆಲೆ

Sampriya
ಭಾನುವಾರ, 7 ಏಪ್ರಿಲ್ 2024 (11:20 IST)
Photo Courtesy X
ಬೆಂಗಳೂರು: ಬಿಸಿಲಿ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುವುದರೊಂದಿಗೆ ಅದರ ಬಿಸಿ ತರಕಾರಿ, ಮಾಂಸದ ದರದ ಮೇಲೂ ತಟ್ಟುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.  ನಾಳೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನೂ ಮುಸ್ಲಿಂ ಬಾಂಧವರಿಗೆ ಇದೀಗ ರಂಜಾನ್ ಸಮಯ. ಈ ವೇಳೆ ಮಾಂಸ, ಮೀನು ಹಾಗೂ ತರಕಾರಿ ಹೆಚ್ಚು ಮಾರಾಟವಾಗುತ್ತದೆ. ಆದರೆ ಈ ಬೆಲೆ ಏರಿಕೆ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದೆ.

ಇದಕ್ಕೆಲ್ಲ ಕಾರಣ  ಬಿಸಿಲ ತಾಪ ಎಂದು ಹೇಳಲಾಗುತ್ತಿದೆ. ರೈತರು ಈ ಉರಿ ಬಿಸಿಲಿಗೆ ಕೋಳಿಗಳು ಸಾಯುವ ಸಾಧ್ಯತೆಯಿರುವುದರಿಂದ ಕೋಳಿ ಉತ್ಪಾದನೆಯಲ್ಲಿ  ಕುಂಠಿತ ಮಾಡಿದ್ದಾರೆ. ಹಬ್ಬವಾಗಿರುವುದರಿಂದ ಮಾಂಸದ ಮಾರಾಟ ಜಾಸ್ತಿಯಾಗುತ್ತಿದೆ. ಆದ್ದರಿಂದ ಉತ್ಪಾದನೆ ಕಡಿಮೆಯಾಗಿ ಮಾರಾಟ ಜಾಸ್ತಿಯಾಗಿರುವುದರಿಂದ ಏಕಾಏಕಿ ಕೋಳಿ ಕೆಜಿ 250 ರೂ ಇದ್ದದ್ದು 300 ಪಾಸಿನಲ್ಲಿದೆ.

ಇನ್ನೂ ಕೋಳಿಗಳು ಸಾಯುವ ಭೀತಿಯಿಂದ ಕೋಳಿ ಮಾರಾಟದ ಅಂಗಡಿಯವರು ಕೋಳಿಗಳನ್ನು ಅಂಗಡಿಗಳಲ್ಲಿ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಇದರ ಪೆಟ್ಟು ಗ್ರಾಹಕರಿಗೆ ತಾಗಿದೆ.

ಅದಲ್ಲದೆ ಇದೀಗ ಮಾರುಕಟ್ಟೆಗೆ ಹೆಚ್ಚಿನ ಮೀನುಗಳು ಬರುತ್ತಿಲ್ಲ. ಶೇಖರಣೆ ಮಾಡಿ ಇಟ್ಟುಕೊಂಡರೆ ಹಾಳಾಗುವುವ ಭಯದಲ್ಲಿ ಮಾರಾಟಗಾರರು ಹೆಚ್ಚಾಗಿ ಖರೀದಿಸುತ್ತಿಲ್ಲ. ಇನ್ನೂ ಬಿಸಿಲು ಹೆಚ್ಚಿರುವುದರಿಂದ ಸಂಜೆ ವೇಳೆಗೆ ಮೀನು ಹಾಳಾಗುತ್ತದೆ. ಆದ್ದರಿಂದ ಬಂಗುಡೆ ಮೀನು ಕೆಜಿ 200-250 ಇದ್ದದ್ದು 350ರ ಮಟ್ಟಿಗೆ ಏರಿಕೆಯಾಗಿದೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ನಾವು ಎಲ್ಲಿ ಪ್ರತಿ ತಿಂಗಳು ಹಣ ಕೊಡ್ತೀವಿ ಅಂತಾ ಹೇಳಿದ್ವಿ: ಡಿಕೆ ಶಿವಕುಮಾರ್‌

Rahul Gandhi: ಪಾಕಿಸ್ತಾನದ ಮುಂದೆ ನಮ್ಮ ಎಷ್ಟು ವಿಮಾನ ಕಳೆದುಕೊಂಡಿತು ಲೆಕ್ಕ ಕೊಡಿ

ಮುಂದಿನ ಸುದ್ದಿ
Show comments