Publish Date: Tue, 02 Aug 2022 (20:00 IST)
Updated Date: Tue, 02 Aug 2022 (20:35 IST)
ಮಾಜಿ ಸಿಎಂ ಹೆಚ್ ಕುಮಾರಸ್ವಾಮಿ ಡಿ ಸರಣಿ ಟ್ವೀಟ್ . ಜೆಡಿಎಸ್ ಸಮಾವೇಶವನ್ನು ನಮ್ಮ ತಂದೆ ಬೆಂಗಳೂರಿನ ನಿವಾಸದಿಂದಲೇ ನೇರವಾಗಿ ವೀಕ್ಷಿಸಿದ ಕ್ಷಣದಲ್ಲಿ, ನನ್ನ ಸಹೋದರ ಅಲ್ಲ, ಎಲ್ಲರೂ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದನ್ನು ಬಿಜೆಪಿ ವಿಕೃತವಾಗಿ ತಿರುಚಿದೆ. ಇತರರ ಕಣ್ಣೀರಿನ ಬಗ್ಗೆ ಇದೆಂಥಾ ವಿಕಾರ. ಇದೇನಾ ಸಂಘ ಕಲಿಸಿದ ಸಂಸ್ಕಾರ ಎಂದು ಕಿಡಿಕಾರಿದ್ದಾರೆ. ವಿಕೃತ ಬಿಜೆಪಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಅಧಿಕಾರ ಹೋಗುತ್ತದೆ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿದಾಯ ಭಾಷಣ ಮಾಡಿದರು ವೇದಿಕೆಯ ಮೇಲೆಯೇ ಕಣ್ಣೀರು ಹರಿಸಿದವರು ಯಾವ ಪಕ್ಷದವರು ಎಂದು ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.