Publish Date: Wed, 05 Jul 2023 (16:41 IST)
Updated Date: Wed, 05 Jul 2023 (17:25 IST)
ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂಥ ಹೊಲಸು ಕೆಲಸ ನಾನಂತೂ ಮಾಡಲ್ಲ, ಮಾಡಿಲ್ಲ. ಜೆಡಿಎಸ್ನವರಿಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದರು. ಅಂಥ ಅಭ್ಯಾಸ ನನಗಂತೂ ಇಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ, ಅಭಿಪ್ರಾಯ ಹೇಳುವುದಕ್ಕೆ ಸ್ವತಂತ್ರರು.. ಕಾನೂನು ಇದ್ದೇ ಇದೆ, ಅದಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಪೆನ್ಡ್ರೈವ್ ಆದ್ರೂ ಇರಲಿ, ಸಿಡಿ ಆದ್ರೂ ಇರಲಿ, ನಿಮ್ಮ ಟಿವಿಯಲ್ಲಾದ್ರೂ ಇರಲಿ, ಏನೇ ಇದ್ರೂ ಕಾನೂನು ಅಡಿಯಲ್ಲಿ ಎಲ್ಲವೂ ಆಗಬೇಕು ಎಂದು ಕಿಡಿಕಾರಿದ್ರು