Publish Date: Wed, 22 Jan 2020 (17:39 IST)
Updated Date: Wed, 22 Jan 2020 (17:40 IST)
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಕಿಸ್ತಾನದ ಲೀಡರ್ ನಂತೆ ಮಾತನಾಡೋಕೆ ಶುರುಮಾಡಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಖಾನ್ ಅವರ ಅಳಿಯನಂತೆ ಕುಮಾರಸ್ವಾಮಿ ಮಾತನಾಡ್ತಿದ್ದಾರೆ. ಹೀಗಂತ ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಬಗ್ಗೆ ಲಘುವಾಗಿ ಮಾತನಾಡಿರೋ ಕುಮಾರಸ್ವಾಮಿಗೆ ಮಾನಸಿಕ ಸ್ಥಿತಿ ಸರಿಯಿಲ್ಲ. ಸರಕಾರದಿಂದಲೇ ಅವರ ಆರೋಗ್ಯ ತಪಾಸಣೆ ಮಾಡಿಸಬೇಕಿದೆ ಅಂತ ಲೇವಡಿ ಮಾಡಿದ್ದಾರೆ.
ಕರ್ನಾಟಕದ ಓವೈಸಿ ಥರ ಆಗೋಕೆ ಹೊರಟಿರೋ ಕುಮಾರಸ್ವಾಮಿಯವರ ರಾಜಕೀಯವೇ ಹಾಸ್ಯಾಸ್ಪವಾಗಿದ್ದು, ರಾಜಕೀಯ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಅಂತ ಟಾಂಗ್ ನೀಡಿದ್ದಾರೆ.