Webdunia - Bharat's app for daily news and videos

Install App

ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಯುವತಿಗೆ ಕಿರುಕುಳ‌

Webdunia
ಸೋಮವಾರ, 19 ಡಿಸೆಂಬರ್ 2022 (20:47 IST)
ಕಾಲೇಜು ಕಟ್ಟಡದ ಏಳನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದೆ ಭಾವಿ ಗಂಡ ನೀಡುತ್ತಿದ್ದ ಒತ್ತಡವೇ ಕಾರಣ ಎಂಬುವುದು ಬಹಿರಂಗವಾಗಿದೆ.ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಯುವತಿಗೆ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಯುವಕ ಕಿರುಕುಳ‌ ನೀಡಿದ್ದು ಒತ್ತಡ ತಾಳಲಾರದೆ ಡೆತ್ ನೋಟ್ ಬರೆದು ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿರುವುದು ತನಿಖೆ ವೇಳೆ ಗೊತ್ತಾಗಿದೆ.
ವಿವಿಪುರಂ ಬಿಟಿಎಸ್ ಕಾಲೇಜಿನಲ್ಲಿ‌ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಾಣಿ ಕಳೆದ‌ ಒಂದು ತಿಂಗಳ ಹಿಂದೆ ಗಿರಿನಗರದ ನಿವಾಸಿ ಚಂದ್ರಶೇಖರ್ ನೊಂದಿಗೆ ಎಂಗೇಜ್ ಮೆಂಟ್ ಆಗಿತ್ತು. ಇದಾದ ನಂತರ ಯುವತಿ ಜೊತೆ ಪೋನ್ ಸಂಪರ್ಕದಲ್ಲಿದ್ದ ಚಂದ್ರಶೇಖರ್, ಹೊರಗೆ ಸುತ್ತಾಡಲು ಕರೆಯುತ್ತಿದ್ದ. ಇದನ್ನು ವಾಣಿ ನಯವಾಗಿ ತಿರಸ್ಕರಿಸಿದ್ದಳು.‌ ಇದರಿಂದ ಅಸಮಾಧಾನಗೊಂಡ ಚಂದ್ರಶೇಖರ್ ನಿನ್ನೆ ಮನೆಗೆ ಹೋಗಿ ತಗಾದೆ ತೆಗೆದಿದ್ದ. ಹೊರಗೆ ನನ್ನ ಜೊತೆ ಬರಲು ಆಗುವುದಿಲ್ಲ ಎಂದರೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂದು ನಿಂದಿಸಿದ್ದ ಎಂದು ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂಧಿಯಿಂದ ದಂಪತಿ ಬಳಿ ವಸೂಲಿ ಮಾಡಿ ಅಮಾನತ್ತಾದ ಪ್ರಕರಣ ಬಳಿಕ ಎಚ್ಚೆತ್ತ ನಗರ ಪೊಲೀಸ್ರು  ನೈಟ್ ರೌಂಡ್ಸ್ ಪೊಲೀಸ್ರ ಮಾನಿಟರ್ ಗೆ ಹೊಸ ಪ್ಲಾನ್ ಮಾಡಿದ್ದಾರೆ.
ಪದೇ ಪದೇ ನೈಟ್ ಪೊಲೀಸ್ ಸಿಬ್ಬಂಧಿ ಮೇಲೆ ಕೇಳಿಬರುತ್ತಿರುವ ಆರೋಪ ಹಿನ್ನಲೆ ಈ  ಪ್ಲಾನ್ ಮಾಡಿದ್ದು,
ಟ್ರಾಫಿಕ್ ಪೊಲೀಸರ ರೀತಿ ಲಾ ಅಂಡ್ ಆರ್ಡರ್ ಪೊಲೀಸರಿಗೆ ಬಾಡಿ ವಾರ್ನ್ ಕ್ಯಾಮೆರಾ ನೀಡ್ತಿದ್ದಾರೆ.ಪೊಲೀಸರ ಮೇಲಿನ ಆರೋಪಗಳ ಬೆನ್ನಲ್ಲೆ ಇಂತಹುದೊಂದು ಚಿಂತನೆ‌ ನಡೆಸಿರೋ ಇಲಾಖೆ ನಗರದ ಎಲ್ಲಾ ನೈಟ್ ಬೀಟ್ ನಲ್ಲಿರೋ ಪೊಲೀಸರಿಗೆ ಬಾಡಿ ವಾರ್ನ್ ಕ್ಯಾಮೆರಾ ನೀಡಲು ಸಿದ್ದತೆ ನಡೆಸಿದೆ.ಸಂಚಾರಿ ಪೊಲೀಸ್ರ ಮೇಲೆ ಆರೋಪಗಳು ಬಂದಾಗ ಬಾಡಿ ವಾರ್ನ್ ಕ್ಯಾಮೆರಾ ನೀಡಲಾಗಿತ್ತು.ಬಾಡಿ ವಾರ್ನ್ ಕ್ಯಾಮೆರಾ ಮೂಲಕ ಪೊಲೀಸ್ರನ್ನ ಲೈವ್ ಮಾನಿಟರ್ ಮಾಡಬಹುದು.ಈ ಮೂಲಕ ಪೊಲೀಸರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಸಾಕಷ್ಟು ಉಪಕಾರಿಯಾಗುತ್ತೆ.
ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ಲಾ ಅಂಡ್ ಆರ್ಡರ್ ಪೊಲೀಸ್ರಿಗೂ ಸಿಗಲಿದೆ ಬಾಡಿ ವಾರ್ನ್ ಕ್ಯಾಮೆರಾ ನೀಡಲು ಇಲಾಖೆ ಸನ್ನದ್ಧವಾಗಿದೆ.ಇದ್ರಿಂದ ಆರೋಪಗಳು ಅಷ್ಟೇ ಅಲ್ಲ ಪೊಲೀಸರ ನಡವಳಿಕೆಯನ್ನೂ ಬಾಡಿ ವಾರ್ನ್ ಮೂಲಕ ಮಾನಿಟರ್ ಮಾಡಲು ಸಹಕಾರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments