Publish Date: Thu, 29 Jun 2023 (17:00 IST)
Updated Date: Thu, 29 Jun 2023 (17:05 IST)
ಎಲ್ಲ ಇಲಾಖೆಗಳ ನಿಗಮಗಳ ಕಾಮಗಾರಿಗಳ ಬಿಲ್ ತಡೆಯಿಂದ ಸರ್ಕಾರ ಹಿಂದೆ ಸರಿದಿದೆ.ಕೊನೆಗೂ ಗುತ್ತಿಗೆದಾರರ ಮನವಿಗೆ ಸರ್ಕಾರ ಮಣಿದಿದೆ.ಕಾಮಗಾರಿ ಬಿಲ್ ಬಿಡುಗಡೆಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಎಲ್ಲ ಇಲಾಖೆಗಳ ಹಾಗೂ ಅಧೀನಕ್ಕೊಳಪಡುವ ಕಾಮಗಾರಿಗಳಿಗೆ ಬಿಲ್ ಹಣ ಬಿಡುಗಡೆಗೆ ಸುತ್ತೋಲೆ ಸರ್ಕಾರ ಹೊರಡಿಸಿದೆ.ಕಾಮಗಾರಿಗಳ ಬಿಲ್ಲುಗಳ ನೈಜತೆ ಹಾಗೂ ನಿಯಮಾನುಸಾರ ಇದೇಯಾ ಖಾತ್ರಿ ಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆಗೆ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕ್ ರೂಪ್ ಕೌರ್ ರಿಂದ ಸೂತ್ತೋಲೆ ಹೊರಡಿಸಲಾಗಿದೆ.