Webdunia - Bharat's app for daily news and videos

Install App

ಇನ್ಮುಂದೆ ನಗರದ ಮರಗಳಿಗೆ ಬೀಳುತ್ತಿದ್ದ ಕೊಡಲಿ ಪೆಟ್ಟಿಗೆ ಪಾಲಿಕೆಯಿಂದ ಬ್ರೇಕ್..!

Webdunia
ಮಂಗಳವಾರ, 13 ಡಿಸೆಂಬರ್ 2022 (21:11 IST)
ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮರಗಳ ಗಣತಿ ಕೊನೆಗೂ ಆರಂಭ ಗೊಂಡಿದೆ,ನಗರವು ದಿನದಿಂದ ದಿನಕ್ಕೆ ಬಹಳ ವೇಗವಾಗಿ ಬೆಳೆಯುತ್ತಿದೆ ಇಷ್ಟಾದರು ಪಾಲಿಕೆ ಮಾತ್ರ ನಗರದಲ್ಲಿನ ಮರಗಳ ಲೆಕ್ಕಾಚಾರ ಮಾತ್ರ ಸಂಗ್ರಹಿಸಿರಲ್ಲಿಲ್ಲ ಮೊನ್ನೆ ತಾನೆ ಹೈಕೋರ್ಟ್ ನಗರದಲ್ಲಿರುವ ಮರಗಳ ಲೆಕ್ಕಪತ್ರ ನೀಡಿ ಎಂದು ಪಾಲಿಕೆಯ ಅರಣ್ಯ ವಿಭಾಗಕ್ಕೆ ಚಾಟಿ ಬಿಸಿದ ಬೆನ್ನಲ್ಲೇ, ಎದ್ನೂ ಬಿದ್ನೂ ಅಂತಾ ಮಲ್ಲೇಶ್ವರಂ ಭಾಗದಿಂದ ಮರಗಳ ಗಣತಿಗೆ ಆ್ಯಪನ್ನು ಅಭಿವೃದ್ಧಿ ಪಡಿಸಿಕೊಂಡು ಮರಗಳ ಲೆಕ್ಕಾಚಾರ ಶುರುಮಾಡಿದೆ.
 
ಉದ್ಯಾನ ನಗರಿ ಬೆಂಗಳೂರಿನ ಮರಗಳ ಲೆಕ್ಕಾಚಾರ ಕಾರ್ಯ 2015 ರಲ್ಲೇ ಆರಂಭವಾಗಬೇಕಿತ್ತು,ರಾಜ್ಯ ಅರಣ್ಯ ಇಲಾಖೆ ಹಾಗೂ ಪಾಲಿಕೆಯ ಅರಣ್ಯ ಇಲಾಖೆ ಘಟಕದ ನಡುವಿನ ಸಮನ್ವಯ ಕೊರತೆಯಿಂದ ಈ ಕಾರ್ಯ ವಿಳಂಬವಾಗಿತ್ತು,ಈ ನಡುವೆ ಕೆಲವು ಸಂಸ್ಥೆಗಳ ಸಹಯೋಗದಲ್ಲಿ ಪಾಲಿಕೆ ಮರಗಳ ಗಣತಿ ಆರಂಭಿಸುವುದಕ್ಕೆ ಮುಂದಾಗಿತ್ತು ಆದರೆ ಗಣತಿ ನಡೆಸುವಲ್ಲಿ ವಿಫಲವಾಗಿತ್ತು,ಈ ನಡುವೆ ನ್ಯಾಯಾಲಯವು ಮರಗಳ ಗಣತಿ ನೆಡೆಸುವಂತೆ ಬಿಬಿಎಂಪಿಗೆ ತರಾಟೆ ತೆಗೆದುಕೊಂಡಿದ್ದು. ಅದರಂತೆ ಆ್ಯಪ್ ಮೂಲಕ ಮರಗಳ ಲೆಕ್ಕಾಚಾರಕ್ಕೆ ಮುಂದಾಗಿದೆ ಪಾಲಿಕೆ. 
 
 ಇದೀಗ  ವಿನೂತನ ಆ್ಯಪ್ ನೊಂದಿಗೆ ಗಣತಿ ಶುರು ಮಾಡಿರುವ ಪಾಲಿಕೆ ಪ್ರತಿ ಮರಕ್ಕೂ ಕ್ಯೂ ಆರ್ ಕೋಡ್ ಅಂಟಿಸಲಾಗುತ್ತಿದೆ,ಈ ಕ್ಯೂ ಆರ್ ಕೋಡನ್ನು ಯಾರು ಬೇಕಾದರೂ ತಮ್ಮ ಮೊಬೈಲ್ ಮೂರಲಕ ಸ್ಕ್ಯಾನ್ ಮಾಡಿ ಮರದ ಜಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಬಹುದು.ಒಟ್ಟಾರೆ ಖಾಸಗಿ ಮರಗಳಿರಲಿ ಸರ್ಕಾರಿ ಮರಗಳಿರಲಿ ಎಲ್ಲಾ ಮರಗಳಿಗೂ ಬೀಳಲಿದೆ ಕ್ಯೂ ಆರ್ ಕೋಡ್,
 
ಈಗಾಗಲೇ ಮಲ್ಲೇಶ್ವರಂ ಮತ್ತು ಮಹದೇವಪುರ ವಾರ್ಡ್ ಮಟ್ಟದಲ್ಲಿ ಪಾಲಿಕೆಯಿಂದ ಮರಗಳ ಗಣತಿ ಶುರುವಾಗಿದ್ದು ಆದಷ್ಟು ಬೇಗ ಮರಗಳ ಲೆಕ್ಕಾಚಾರ ಮಾಹಿತಿ ಕೊಡುವುದಾಗಿ ಪಾಲಿಕೆ ತಿಳಿಸಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments