Publish Date: Fri, 27 Oct 2023 (16:45 IST)
Updated Date: Fri, 27 Oct 2023 (16:48 IST)
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮ ಆಗಿಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿ ಇದ್ದೇವೆ.
ಎಲ್ಲವನ್ನೂ ಸಹಿಸಿಕೊಳ್ಳಬೇಕು. ಆದರೆ ಎಲ್ಲವನ್ನೂ ಸಹಿಸಲಾಗಲ್ಲ. ನನಗೆ ನೂರರಷ್ಟು ಬೇಸರ ಇಲ್ಲ. ಪಂಚ ರಾಜ್ಯ ಚುನಾವಣೆ ಬಹಳ ಮುಖ್ಯ. ಅದನ್ನೇ ನೇತಾಡಿಕೊಂಡು ಕೂರೋದು ಸರಿಯಲ್ಲ. ಇಂದು ತಮಿಳುನಾಡು ರಾಜ್ಯಕ್ಕೆ ಹೋಗ್ತಿದ್ದೇನೆ. ಮೂರ್ನಾಲ್ಕು ದಿನಗಳ ಬಳಿಕ ವಾಪಸ್ ಆಗ್ತೇನೆ. ಹೈಕಮಾಂಡ್ ಮತ್ತೆ ಅವಕಾಶ ಕೊಟ್ಟಾಗ ದೆಹಲಿಗೆ ಹೋಗ್ತೇನೆ ಎಂದ್ರು.