Webdunia - Bharat's app for daily news and videos

Install App

ನವರಾತ್ರಿ ಸಮಯದಲ್ಲಿ ರಾಜಮನೆತನಕ್ಕೆ ಎಂದೂ ಹೀಗಾಗಿರಲಿಲ್ಲ: ಅರಮನೆಯಲ್ಲಿ ನಡೆಯುತ್ತಿದೆ ಭಾರೀ ಚರ್ಚೆ

Krishnaveni K
ಶುಕ್ರವಾರ, 11 ಅಕ್ಟೋಬರ್ 2024 (16:14 IST)
ಮೈಸೂರು: ದಸರಾ ಸಮಯದಲ್ಲಿ ಹಿಂದೆಂದೂ ಆಗಿರದಂತಹ ಸನ್ನಿವೇಶ ಈ ಬಾರಿ ಮೈಸೂರು ರಾಜವಂಶಸ್ಥರಿಗೆ ಆಗಿದೆ. ಈ ಹಿನ್ನಲೆಯಲ್ಲಿ ರಾಜಪುರೋಹಿತರು ಚರ್ಚೆ ನಡೆಸುತ್ತಿದ್ದಾರೆ.

ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಗೆ ಇಂದು ಎರಡನೇ ಮಗುವಿನ ಜನನವಾಗಿದೆ. ಅದೂ ನವರಾತ್ರಿ ಸಂದರ್ಭದಲ್ಲೇ ಆಗಿದೆ ಎಂದು ಜನ ಸಂಭ್ರಮಪಡುತ್ತಿದ್ದರೆ ಇನ್ನೊಂದೆಡೆ ರಾಜವಂಶಸ್ಥರಿಗೆ ಅಶೌಚ ಸೂತಕ ಎದುರಾಗಿದೆ. ಅಶೌಚವಿದ್ದಾಗ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವುದು ಹೇಗೆ ಎಂಬ ಸಂಕಟ ಎದುರಾಗಿದೆ.

ರಾಜಮನೆತನದಲ್ಲಿ ಎಂದೂ ದಸರಾ ಹಬ್ಬದ ಸಂದರ್ಭದಲ್ಲಿಯೇ ಮಗು ಜನಿಸಿದ ಉದಾಹರಣೆಗಳು ವಿರಳ. ಆದರೆ ಈ ಬಾರಿ ರಾಜ ಪೀಠಸ್ಥ ಯದುವೀರ್ ಗೆ ಎರಡನೆಯ ಪುತ್ರ ಜನಿಸಿದ್ದಾನೆ. ಈ ಕಾರಣಕ್ಕೆ ರಾಜವಂಶಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಅದರ ನಡುವೆ ದಸರಾ ಸಾಂಪ್ರದಾಯಿಕ ವಿಧಿ ವಿಧಾನದಲ್ಲಿ ಯದುವೀರ್ ಭಾಗಿಯಾಗಬಹುದೇ, ಅವರಲ್ಲದೇ ಇದ್ದರೆ ಅದನ್ನು ಮಾಡುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಆದರೆ ರಾಜಪುರೋಹಿತರೊಂದಿಗೆ ಯದುವೀರ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯದುವೀರ್ ಕಂಕಣ ಧಾರಣೆ ಮಾಡಿದ್ದಾರೆ. ಕಂಕಣ ಧಾರಣೆ ಮಾಡಿದಾಗ ಯಾವುದೇ ಅಶೌಚಗಳು ಲೆಕ್ಕಕ್ಕೆ ಬರುವುದಿಲ್ಲ. ರಾಜವಂಶದ ಇತರರಿಗೆ ಸೂತಕವಿದ್ದರೂ ಕಂಕಣ ಧಾರಣೆ ಮಾಡಿದ ಕಾರಣಕ್ಕೆ ಯದುವೀರ್ ಸಾಂಪ್ರದಾಯಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments