Select Your Language

Notifications

webdunia
webdunia
webdunia
webdunia

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ಇಲ್ಲಿದೆ ವಿವರ

DK Shivakumar
ಬೆಂಗಳೂರು: ಗಜ ಪ್ರಸವದಂತಾಗಿದ್ದ ಕರ್ನಾಟಕ ಸಚಿವರ ಖಾತೆ ಹಂಚಿಕೆ ವಿಚಾರ ಕೊನೆಗೂ ಬಗೆಹರಿದಿದೆ. ನೂತನ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಖಾತೆ ಹಂಚಿಕೆ ಮಾಡಿದ್ದು ಯಾರಿಗೆ ಯಾವ ಖಾತೆ ಎಂಬ ವಿವರ ಇಲ್ಲಿದೆ.

ಸಿಎಂ ಆಗಿ ಎರಡು ತಿಂಗಳು ಕಳೆದಿದ್ದರೂ ಡಿಕೆ ಶಿವಕುಮಾರ್ ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆಯಾಗಿರಲಿಲ್ಲ. ಕಳೆದ ವಾರ ಕೊನೆಗೂ ಹೈಕಮಾಂಡ್ ಅಳೆದು ತೂಗಿ 19 ಶಾಸಕರಿಗೆ ಸಚಿವ ಪಟ್ಟ ನೀಡಿತ್ತು. ಇದಾಗಿ ಒಂದು ವಾರದ ಬಳಿಕ ಈಗ ಖಾತೆ ಹಂಚಿಕೆಯಾಗಿದೆ. ನಾಳೆ ಅಧಿವೇಶನ ಆರಂಭವಾಗಲಿದ್ದು ಅದಕ್ಕೆ ಮೊದಲು ಖಾತೆ ಹಂಚಿಕೆಯಾಗಿರುವುದರಿಂದ ಡಿಕೆಶಿ ನಿಟ್ಟುಸಿರು ಬಿಟ್ಟಿದ್ದಾರೆ.

ಯಾರಿಗೆ ಯಾವ ಖಾತೆ?
ಎನ್ ಚೆಲುವರಾಯಸ್ವಾಮಿ-ಕೃಷಿ ಇಲಾಖೆ
ರಿಜ್ವಾನ್ ಅರ್ಷದ್- ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ
ಕೆಎಚ್ ಮುನಿಯಪ್ಪ-ಸಮಾಜ ಕಲ್ಯಾಣ
ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
ಕೆಎಸ್ ಬಸವಂತಪ್ಪ-ಬಂದರು, ಮೀನುಗಾರಿಕೆ
ಮಧು ಬಂಗಾರಪ್ಪ- ಶಾಲೆ ಶಿಕ್ಷಣ ಇಲಾಖೆ
ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ ಇಲಾಖೆ
ಜಮೀರ್ ಅಹ್ಮದ್ – ವಸತಿ ಇಲಾಖೆ
ಲಕ್ಷ್ಮಣ್ ಸವದಿ- ಸಹಕಾರ ಇಲಾಖೆ
ಡಾ ಅಜಯ್ ಸಿಂಗ್ –ಅರಣ್ಯ
ಎಸ್ಎಸ್ ಮಲ್ಲಿಕಾರ್ಜುನ- ಗಣಿ ಮತ್ತು ಭೂವಿಜ್ಞಾನ
ಎಚ್ ಸಿ ಬಾಲಕೃಷ್ಣ- ಸಣ‍್ಣ ನೀರಾವರಿ
ಪುಟ್ಟರಂಗಶೆಟ್ಟಿ- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ


Share this Story:

Follow Webdunia kannada

ಮುಂದಿನ ಸುದ್ದಿ

ಭಾರತಾಂಬೆಗೆ ನಮನ… ವಿದೇಶದಿಂದ ಬಂದಿಳಿದ ತಕ್ಷಣ ನವಜಾತ ಶಿಶುವಿನ ಜೊತೆ ತಾಯಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಸಲಾಂ Video