Webdunia - Bharat's app for daily news and videos

Install App

ಬ್ಯಾಂಕ್ ನಲ್ಲಿಟ್ಟ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳುವಾಗ ನಕಲಿ!

Webdunia
ಮಂಗಳವಾರ, 3 ಆಗಸ್ಟ್ 2021 (16:40 IST)
ಬ್ಯಾಂಕ್ ಗಳಲ್ಲಿ ಅಡ್ಡವಿಟ್ಟ ಚಿನ್ನ ಬಿಡಿಸಿಕೊಳ್ಳುವಾಗ ನಕಲಿ ಆಗಿದೆ ಅಂದರೆ ನೀವು ನಂಬುತ್ತಿರಾ? ಅಂತಹ ಆಘಾತಕಾರಿ ಘಟನೆಯೊಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರೂ ಸಮೀಪದ ಹೊನ್ನಗನಹಳ್ಳಿಯ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದಿದೆ.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಡ ಇಟ್ಟಿದ್ದ ಚಿನ್ನದಲ್ಲಿ ಕೆಲ ಚಿನ್ನವನ್ನ ನಕಲಿ ಮಾಡಿ ಸಿಕ್ಕಿಬಿದ್ದಿದ್ದಾನೆ. ಜನರು ಕಷ್ಟ ಅಂತ ಕೆನರಾ ಬ್ಯಾಂಕ್ ನಲ್ಲಿ ತಮ್ಮ ಒಡವೆಗಳನ್ನ ಅಡ ಇಟ್ಟಿದ್ದರು. ಹೀಗೆ ಅಡವಿಟ್ ಚಿನ್ನಾಭರಣಗಳಿಗೆ ಬಡ್ಡಿ ಕಟ್ಟದೆ ಇರೋದನ್ನ ಬ್ಯಾಂಕ್ ನಿಯಮದಂತೆ ಹರಾಜು ಮಾಡಲಾಗುತ್ತೆ. ಈ ನಿಯಮವನ್ನ ಚನ್ನಾಗಿ ತಿಳಿದಿದ್ದ ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಅಂತಹ ಚಿನ್ನಾಭರಣಗಳನ್ನ ಬ್ಯಾಂಕ್ ಲಾಕರ್ ನಿಂದ ತಗೆದು ಆ ಜಾಗಕ್ಕೆ ಅದೇ ರೀತಿ ಇದೆ ಇರುವ ಚಿನ್ನಾಭರಣಗಳನ್ನ ತಂದು ಇಟ್ಟಿದ್ದ.
ಬ್ಯಾಂಕ್ ನಿಯಮದಂತೆ ಇಟ್ಟ ಓಡವೆಗಳಿಗೆ ಬಡ್ಡಿಯನ್ನು ಕಟ್ಟದೆ ರಿನಿವಲ್ ಮಾಡಿಕೊಳ್ಳದೆ ಇರೋ ಚಿನ್ನವನ್ನ ಹರಾಜು ಮಾಡಲಾಗುತ್ತೆ. ಅದೇ ರೀತಿ ಜುಲೈ 17 ರಂದು ಓಡವೆ ಹರಾಜು ಮಾಡಲಾಗುತಿತ್ತು. ಇದಕ್ಕೆ ಅಂತಾ ಮಂಡ್ಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮಾಕಾಂತ್ ಅವರನ್ನ ಕಳುಹಿಸಿಕೊಡಲಾಗಿರುತ್ತೆ. ಬ್ಯಾಂಕ್ ಗೆ ಬಂದ ರಮಾಕಾಂತ್ ಹಾರಜಿಗೆ ಇದ್ದ ಚಿನ್ನಾಭರಣಗಳನ್ನ ಪರೀಕ್ಷೆ ಮಾಡುತ್ತಾರೆ ಆದ್ರೆ ಅಲ್ಲಿ ಇದ್ದ ಚಿನ್ನಾಭರಣಗಳು ನಕಲಿಯಾಗಿರುತ್ತವೆ. ಒಟ್ಟು 352 ಗ್ರಾಹಕರು ಇಟ್ಟಿದ್ದ 9.5 ಕೆಜಿ ಚಿನ್ನಾಭರಣಗಳು ನಕಲಿಯಾಗಿವೆ.
ಈ ಸಂಬಂಧ ರಮಾಕಾಂತ್ ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಅನಂತ್ ನಾಗ್ ಹಾಗೂ ಅಸಲಿ ಚಿನ್ನಾವನ್ನ ನಕಲಿ ಮಾಡಿಕೊಡುತ್ತಿದ್ದ ಗಿರವಿ ಅಂಗಡಿ ಕೆಲಸಗಾರ ರಜನೀಶ್ ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸತ್ಯ ಹೊರ ಬಂದಿದೆ. ಅನಂತ್ ನಾಗ್ ಬ್ಯಾಂಕ್ ನಲ್ಲಿದ್ದ ಓಡವೆಗಳನ್ನ ಈ ರಜನೀಶ್ ಗೆ ನೀಡಿ ಅದೇ ರೀತಿ ಇರುವ ನಕಲಿ ಓಡವೆಗಳನ್ನ ಮಾಡುವಂತೆ ಹೇಳಿ ಆ ನಕಲಿ ಓಡವೆಗಳನ್ನ ಬ್ಯಾಂಕ್ ಲಾಕರ್ ನಲ್ಲಿ ಅನಂತ್ ನಾಗ್ ಇಡುತ್ತಿದ್ದ ಎಂದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments