ನಾನೇನೂ ಮಾಡಿಲ್ಲ, ಆದ್ರೂ ಕರ್ಕೊಂಡು ಬಂದಿದ್ದಾರೆ: ವಾಲ್ಮೀಕಿ ಹಗರಣ ಕೊಳೆತು ನಾರುತ್ತಿದ್ದರೂ ನಾಗೇಂದ್ರ ದಿಮಾಕು ನೋಡಿ

Krishnaveni K
ಶುಕ್ರವಾರ, 12 ಜುಲೈ 2024 (14:46 IST)
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಾಗೇಂದ್ರ ನಾನೇನೂ ಮಾಡಿಲ್ಲ, ಆದ್ರೂ ಕರ್ಕೊಂಡು ಬಂದಿದ್ದಾರೆ ಎಂದಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಪ್ರಮುಖವಾಗಿ ನಾಗೇಂದ್ರ ಮತ್ತು ಆಪ್ತರ ಹೆಸರು ಕೇಳಿಬಂದಿದೆ. ತಾವು ಸಚಿವರಾಗಿದ್ದಾಗ ತಮ್ಮ ಆಪ್ತರ ಮೂಲಕ ನಾಗೇಂದ್ರ ಕೋಟಿಗಟ್ಟಲೆ ಹಣ ಬೇರೆ ಬೇರೆ ರೂಪದಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ನಡುವೆ ಅಕ್ರಮ ಹಣ ವರ್ಗಾವಣೆ ವಿಚಾರವಾಗಿರುವುದರಿಂದ ಇಡಿ ಕಣಕ್ಕಿಳಿದಿದೆ. ಬುಧವಾರ ನಾಗೇಂದ್ರ ನಿವಾಸಕ್ಕೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ ಅವರನ್ನು ವಶಕ್ಕೆ ಪಡೆದುಕೊಂಡಿತು.

ಇಡಿ ಅಧಿಕಾರಿಗಳು ವಶದಲ್ಲಿರುವಾಗ ಮಾಧ್ಯಮಗಳು ಪ್ರಕರಣದ ಬಗ್ಗೆ ಕೇಳಿದಾಗ ‘ನನಗೇನೂ ಗೊತ್ತಿಲ್ಲ, ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಹಾಗಿದ್ದರೂ ಇಡಿ ಅಧಿಕಾರಿಗಳನ್ನು ನನ್ನನ್ನು ಕರೆದುಕೊಂಡು ಬಂದಿದ್ದಾರೆ’ ಎಂದಿದ್ದಾರೆ. ಅಕ್ರಮದ ಬಗ್ಗೆ ಇಷ್ಟೊಂದು ಸಾಕ್ಷ್ಯ ಸಿಕ್ಕಿರುವಾಗಲೂ ಇಂತಹ ಹೇಳಿಕೆ ನೀಡಿರುವ ಮಾಜಿ ಸಚಿವರ ಭಂಡತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಸರಾ ಪಾಸ್ ನಲ್ಲಿ ಗೋಲ್ ಮಾಲ್: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಗಂಭೀರ ಆರೋಪ

ನೊಬೆಲ್ ಪ್ರಶಸ್ತಿಗಾಗಿ ಗೋಗರೆಯುತ್ತಿರುವ ಡೊನಾಲ್ಡ್ ಟ್ರಂಪ್: ಪ್ರಶಸ್ತಿಗಾಗಿ ಹೀಗೂ ಹೇಳ್ತಾರಾ

ಭಾರತಕ್ಕೆ ಅವಮಾನವಾಗಲು ನಾವು ಬಿಡಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್: ಟ್ರಂಪ್ ಗೂ ಚಾಟಿಯೇಟು

Karnataka Weather: ವಾಯುಭಾರ ಕುಸಿತ ಪರಿಣಾಮ ಈ ಜಿಲ್ಲೆಗಳಿಗೆ ಇಂದು ಮಳೆ ಸಾಧ್ಯತೆ

ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ: ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ

ಮುಂದಿನ ಸುದ್ದಿ
Show comments