Publish Date: Mon, 07 Aug 2023 (20:02 IST)
Updated Date: Mon, 07 Aug 2023 (20:10 IST)
ಕೆಲ ಜಿಲ್ಲೆಗಳ ಬಗ್ಗೆ ನಾನು ಸಿಎಂ ಪ್ರತಿ ಕ್ಷೇತ್ರದ ವಿಚಾರ ಚರ್ಚೆ ಮಾಡ್ತಿದ್ದೇವೆ.ಕ್ಷೇತ್ರದಲ್ಲಿ ಏನೆಲ್ಲಾ ಆಗಬೇಕು ಅಂತ ಮಾರ್ಗದರ್ಶನ ಮಾಡಬೇಕಿದೆ.ಅವರ ಸಮಸ್ಯೆ ಕೇಳ್ತಿದ್ದೇವೆ.ಸತತ ಒಂದು ವಾರ ಸಭೆ ನಡೆಯಲಿದೆ.ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತು ಕೊಟ್ಟಿದ್ದೆವು.ಹಾಗಾಗಿ ಮೊದಲು ಅವರ ಸಭೆ ಕರೆದಿದ್ದೇವೆ.ಕಾಂಗ್ರೆಸ್ ಹಾಗೂ ಬಿಜೆಪಿ ಅವಧಿಯಲ್ಲಿ ಕಾಮಗಾರಿಯದ್ದು ಬಾಕಿ ಇದೆ.ಕಾಮಗಾರಿ ನಡೆದಿರೋದು ಸತ್ಯ.ಪ್ರತೀ ವಾರ್ಡಲ್ಲಿ ಕಾಮಗಾರಿ ನಡೆದಿದೆ.ಅದರಂತೆ ತನಿಖೆ ನಡೆಯಲಿದೆ.SIT ನಾವು ಮಾಡಿಲ್ಲ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಲವು ಕೆಲಸ ಮಾಡಿದ್ದಾರೆ.ಮಾಡಿದ್ದಾರಾ ಇಲ್ವಾ, ಯಾವಾಗ ಮಾಡಿದ್ದಾರೆ.?ಕಾಮಗಾರಿ ಆಗಿದೆಯಾ, ಕೆಲಸ ಆಗಿದೆಯಾ, ಕ್ವಾಲಿಟಿ ಇದೆಯಾ.?ಬಿಲ್ ಯಾವಾಗ ಬರೆದ್ರು, ಎಷ್ಟಕ್ಕೆ ಬರೆದ್ರು ಅನ್ನೋದು ನೋಡಬೇಕು.ಅಂತಾ ಕಾಮಗಾರಿ ಮೊದಲೇ ಹಣ ಬಿಡುಗಡೆ ಆಗಿದೆ.ಒಂದು ಕೋಟಿ 99 ಲಕ್ಷ ಬಿಲ್ ಪೆಂಡಿಂಗ್ ಇಟ್ಟಿದ್ದಾರೆ.ಜವಾಬ್ದಾರಿ ಜನಕ್ಕೆ ಕೇಳಿದ್ದಾರೆ.ನಾನು ಹಳ್ಳಿಯಿಂದ ಬಂದಿದ್ದೇನೆ, ಅವರಿಗೆ ಮಾತ್ರ ಗೊತ್ತಿರೋದು ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.