Publish Date: Wed, 02 Aug 2023 (19:02 IST)
Updated Date: Wed, 02 Aug 2023 (19:05 IST)
ಕೆಜೆ.ಹಳ್ಳಿ, ಡಿಜೆ. ಹಳ್ಳಿ ಕೇಸ್ ನ್ಯಾಯಾಂಗ ತನಿಖೆ ಮಾಡಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಕೇಸ್ ಕೂಡ ಹಾಗೆ ಆಗಿದೆ. ಕೆಜೆ ಹಳ್ಳಿ ಕೇಸ್ ಕಮ್ಯುನಲ್ ಅಲ್ಲ, ಡ್ರಗ್ ವಿಚಾರಕ್ಕೆ ಅಂತ ನೀವೇ ಹೇಳಿದ್ದೀರಿ. ಸಿಟ್ಟಿಂಗ್ ಜಡ್ಜ್ ಅವರ ಬಳಿ ತನಿಖೆ ಮಾಡಿಸಿ, ಯಾಕೆ ಆಯ್ತು ಗಲಭೆ ಅಲ್ಲಿ ಅಂತ ಪತ್ತೆ ಮಾಡಿ. ಯಾರು ಇದರಲ್ಲಿ ಇದ್ದಾರೆ ಅಂತ ಬಯಲಿಗೆ ತನ್ನಿ, ನಾನು ಪರಮೇಶ್ವರ್ಗೆ ಹೇಳ್ತೀನಿ ಇದರಲ್ಲಿ ಹೆದರುವುದು ಬೇಡ, ತನಿಖೆ ಮಾಡಿಸಿ ಅದೇನು ಅಂತ ಗೊತ್ತಾಗಲಿ ಎಂದರು.