Publish Date: Sun, 16 Jan 2022 (09:58 IST)
Updated Date: Sun, 16 Jan 2022 (11:00 IST)
ಕಲಬುರಗಿ ನಗರದಲ್ಲಿ ಜನರು ವೀಕೆಂಡ್ ಕರ್ಪ್ಯೂಗೆ ಡೋಂಟ್ ಕೇರ್ ಎಂದಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಅಂಗಡಿಗಳು ಓಪನ್ ಆಗಿವೆ.
ಗುಂಪು ಗುಂಪಾಗಿ ಜನರು ಸೇರಿ ಟೀ ಕುಡಿಯುತ್ತಿದ್ದಾರೆ. ವಾಹನಗಳು ಪ್ರತಿದಿನದಂತೆ ಸಂಚಾರ ನಡೆಸುತ್ತಿವೆ.
ಜನರಿಂದ ಗಿಜುಗುಡುತ್ತಿದ್ದ ಹುಬ್ಬಳ್ಳಿಯ ಎಪಿಎಂಸಿ ತರಕಾರಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ.
ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೊಳಿಸಿದ ಹಿನ್ನೆಲೆ ಬೆರಳೆಣಿಕೆಯಷ್ಟೆ ವ್ಯಾಪಾಸ್ಥರು ಇದ್ದಾರೆ. ಇನ್ನು ಕೊಪ್ಪಳದಲ್ಲಿ ತರಕಾರಿ ಮಾರುಕಟ್ಟೆ ಫುಲ್ ರಶ್ ಆಗಿದೆ. ಸಾಮಾಜಿಕ ಅಂತರ ಮರೆತು ತರಕಾರಿ ವ್ಯಾಪಾರದಲ್ಲಿ ವ್ಯಾಪಾರಸ್ಥರು, ಖರೀದಿದಾರರು ಮುಳುಗಿದ್ದಾರೆ.