Publish Date: Sat, 22 Aug 2020 (23:21 IST)
Updated Date: Sat, 22 Aug 2020 (23:23 IST)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ನೆರೆ ಹಾನಿ ವೀಕ್ಷಣೆಗಾಗಿ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಆ. 24, 25 ರಂದು ಪ್ರವಾಸ ನಡೆಸಲಿದ್ದು, ನೆರೆ ವೀಕ್ಷಣೆಗಾಗಿ ಭೇಟಿ ಕೊಡುವಾಗ ಯಾರೂ ಹೂ- ಹಾರಗಳನ್ನು ತಂದು ಮುಜುಗರ ಉಂಟುಮಾಡಬಾರದೆಂದು ತಿಳಿಸಿದ್ದಾರೆ. ಅಲ್ಲದೇ ಕೊರೊನಾ ತಡೆಗೆ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.