ಭಾಷಣ ಅಲ್ಲ ಕೆಲಸ ಮಾಡಿ ಎಂದ ಮಾಜಿ ಸಿಎಂ ಶೆಟ್ಟರ್

Webdunia
ಮಂಗಳವಾರ, 4 ಅಕ್ಟೋಬರ್ 2022 (14:08 IST)
ಐಟಿ-ಬಿಟಿ ಇಲಾಖೆಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಯಾಂಡ್ ಬೆಂಗಳೂರು ಟೆಕ್ ಉತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಕಾರ್ಯವೈಖರಿ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಸ್ಥಾಪನೆಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಸಹಕಾರ ಸಿಗುತ್ತಿಲ್ಲ.
ಅನುಷ್ಠಾನ ಕಾರ್ಯ ಆಗುತ್ತಿಲ್ಲ. ಇದನ್ನು ಸಂಬಂಧಿಸಿದ ಸಚಿವರು, ಅಧಿಕಾರಿ ಕೆಲಸ‌ ಮಾಡಿಸಬೇಕು. ಆದರೆ ಫೀಲ್ಡ್ ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ‌ ಮಾಡುತ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಪೂರಕ ವಾತಾವರಣ ಮಾತಿನಲ್ಲಿ ಮಾಡಿದ್ರೆ ಸಾಲದು, ಕಾರ್ಯ ಆಗಬೇಕು ಎಂದು ಮುರುಗೇಶ್ ನಿರಾಣಿ ವಿರುದ್ಧ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.
 
ಕಿತ್ತೂರು ಬಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಂತ ಕೈಗಾರಿಕಾ ಮಂತ್ರಿ ಹೇಳಿ ಹೋದರು. ಇದು ಸಾಧ್ಯಾನಾ? ಯಾವುದಾದರೂ ತಂಡ ಭೇಟಿ‌ ಕೊಟ್ಟಿದ್ದನ್ನು ಸುಳ್ಳು ಹೇಳಿದ್ರೆ..? ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತಿದೆ. ವಿಶೇಷ ಹೂಡಿಕೆ ವಲಯ ಘೋಷಣೆ ಆಗಿದೆ, ಆದರೆ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ ಎಂದರು.
ಅಶ್ವಥ್ ನಾರಾಯಣ ತಾವು ಕೆಲಸ ಮಾಡಿಸಬೇಕು. ನಾನು‌ ಸಿಎಂ ಆದಾಗ ಇನ್ಫೋಸಿಸ್ ಗೆ ಜಾಗ ನೀಡಿದ್ದೆ. ಆದರೇ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿಲ್ಲ. ಕೇವಲ ಕಾರ್ಯಕ್ರಮ ಮಾಡಿ‌ ಹೋಗುತ್ತೇವೆ ಕೆಲಸ‌ಗಳು ಆಗುತ್ತಿಲ್ಲ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಂ ಆ್ಯಪ್ ತಾತ್ಕಾಲಿಕ ಬ್ಯಾನ್: ಕಾರಣವೇನು ಇಲ್ಲಿದೆ ವಿವರ

ಈ ಮಗುವಿಗೆ ಎಷ್ಟು ಸಂಸ್ಕಾರ ಕಲಿಸಿರಬೇಕು... ಯೋಧನ ನೋಡಿ ಏನು ಮಾಡ್ತು ನೋಡಿ Video

ಕೇರಳದಲ್ಲಿ ನಡು ರಸ್ತೆಯಲ್ಲಿ ಹಾಡ ಹಗಲೇ ದರೋಡೆ: ದರೋಡೆಕೋರ ಯಾರು ಎಂದು ಗೊತ್ತಾದರೆ ನೀವೇ ಶಾಕ್ ಆಗ್ತೀರಿ Video

ಕಾರಿಗೆ ಢಿಕ್ಕಿ ಹೊಡೆದಿದ್ದಕ್ಕೆ ಸಾರ್ವಜನಿಕರು ದಾಳಿ ಮಾಡಲು ಮುಂದಾದಾಗ ಲಾರಿ ಚಾಲಕ ಮಾಡಿದ ಕೆಲಸಕ್ಕೆ ಎಲ್ಲರೂ ಪರಾರಿ Video

ಕರ್ನಾಟಕದಂತಲ್ಲ, ಕೇರಳದಲ್ಲಿ ಎಲ್ಲಾ ಮಹಿಳೆಯರಿಗೂ ಫ್ರೀ ಬಸ್

ಮುಂದಿನ ಸುದ್ದಿ
Show comments