Publish Date: Tue, 28 Mar 2023 (20:52 IST)
Updated Date: Tue, 28 Mar 2023 (19:55 IST)
ಯಡಿಯೂರಪ್ಪ ಅವರ ಮನೆ ಮೇಲೆ ಆದ ಗಲಾಟೆ ಇದು ಬಿಜೆಪಿಯ ಆಂತರಿಕ ಕುತಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಆರೋಪಿಸಿದ್ದಾರೆ.ಈ ಬಗ್ಗೆ ಮಾತನಡಿದ ಅವರು.ಯಡಿಯೂರಪ್ಪನವರು ಸರ್ಕಾರದ ಪ್ರತಿನಿಧಿಯಲ್ಲ. ಮೀಸಲಾತಿ ವಿಚಾರದಲ್ಲಿ ಸಿಎಂ ಗೊಂದಲ ಸೃಷ್ಟಿಸಿದ್ದಾರೆ.ಈಗ ಯಡಿಯೂರಪ್ಪನವರನ್ನ ಸೆಂಟರ್ ಸ್ಟೇಜ್ ಗೆ ತರಬೇಕು. ಎಂದು ಅಮಿತ್ ಷಾ ಮನೆಗೆ ಹೋಗಿಬೆನ್ನು ತಟ್ಟಿ ಬಂದಿದ್ದಾರೆ. ಇದಾದ ಬಳಿಕ ನಿನ್ನೆ ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದರೆ ಕಾರಣ ಏನು?.ಇದು ಬಿಜೆಪಿಯ ಆಂತರಿಕ ಕುತಂತ್ರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.