Publish Date: Sun, 09 Jul 2023 (21:03 IST)
Updated Date: Sun, 09 Jul 2023 (17:24 IST)
ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್ಗೆ ಡಿಕೆಶಿ ಭೇಟಿ ನೀಡಿದ್ರು.ಉಪ್ಪಿಟ್ಟು ಕೇಸರಿಬಾತ್ ಪಡೆದು ಡಿಕೆಶಿ ಸವಿದ್ರು.ಇಂದಿರಾಕ್ಯಾಂಟಿನ್ನಲ್ಲೇ ತಿಂಡಿಯನ್ನ ಡಿಸಿಎಂ ಡಿಕೆಶಿವಕುಮಾರ್ ಸವಿದ್ರು.ಅಲ್ಲದೇ ಕ್ಯಾಂಟೀನ್ನಲ್ಲಿ ತಿಂಡಿ ಸೇವಿಸುತ್ತಿದ್ದ ಸಾರ್ವಜನಿಕರನ್ನು ಡಿಕೆಶಿವಕುಮಾರ್ ಮಾತನಾಡಿಸಿದರು. ದುಡ್ಡು ಎಷ್ಟು ಕೊಟ್ಟಿದ್ದಿರಾ ಎಂದು ಸಾರ್ವಜನಿಕರನ್ನ ಡಿಕೆ ಶಿವಕುಮಾರ್ ಪ್ರಶ್ನಿಸಿದ್ರು.
ಇಂದೀರಾ ಕ್ಯಾಂಟೀನ್ ಊಟದಲ್ಲಿ ವ್ಯತ್ಯಾಸವಿದ್ದರೆ ಕರೆ ಮಾಡಿ ಎಂಬ ಸಂಖ್ಯೆ ಗೆ ಖುದ್ದು ಡಿಕೆ ಶಿವಕುಮಾರ್ ಕರೆ ಮಾಡಿದ್ರು.ಆದ್ರೆ ನಂಬರ್ invalid ಅಂತ ಬಂತು.ಇಂದಿರಾ ಕ್ಯಾಂಟೀನ್ ಸಹಾಯವಾಣಿ ಸಂಖ್ಯೆ 9108021222 Invalid ಬಂದ ಹಿನ್ನೆಲೆ ಡಿಕೆಶಿ ಸೈಲೆಂಟ್ ಆದ್ರು.ಕ್ಯಾಂಟಿನ್ ಸಿಬ್ಬಂದಿ ಬಳಿ ಮೇನು ಡಿಕೆಶಿ ಕೇಳಿದ್ರು.ಬೆಳಗ್ಗೆ, ಮಧ್ಯಾಹ್ನ, ಸಂಜೆ ಏನ್ ಅಡುಗೆ ಮಾಡ್ತೀರಾ?ಅಂತಾ ಕೇಳಿದಕ್ಕೆ ಈ ವೇಳೆ ಸಿಬ್ಬಂದಿ ವಿವರಣೆ ನೀಡಿದ್ರು.ಐದು ರೂಪಾಯಿ ಬೆಲೆಗೆ ಹತ್ತು ರೂಪಾಯಿ ಡಿಕೆಶಿ ಪಡೆಯುತ್ತಿದ್ರು.ಇಲ್ಲ ಸರ್.. ಅವರು ಎರಡು ಪ್ಲೇಟ್ ತೆಗೆದುಕೊಂಡ್ರು ಅಂತಾ ಸಿಬ್ಬಂದಿ ಹೇಳಿದ್ರು