Publish Date: Fri, 05 Dec 2025 (16:30 IST)
Updated Date: Fri, 05 Dec 2025 (16:33 IST)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿರುವಾಗ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾನು ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿರುವುದು ನಿಜ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಾನು ಸತೀಶ್ ಭೇಟಿ ಆಗಿದ್ದು ನಿಜ. ನಾವಿಬ್ಬರು ಕೊಲೀಗ್ಗಳು. ಕ್ಯಾಬಿನೆಟ್ನಲ್ಲಿ ಇರ್ತೀವಿ, ರಾತ್ರಿ ಊಟಕ್ಕೆ ಸೇರ್ತೀವಿ, ಬೆಳಗ್ಗೆ ತಿಂಡಿಗೆ ಸೇರ್ತೀವಿ ಇವೆಲ್ಲ ಇದ್ದೇ ಇರುತ್ತದೆ. ಈ ಮೂಲಕ ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ತನ, ಸ್ನೇಹ ಎಲ್ಲ ಇದ್ದೇ ಇರುತ್ತದೆ ಎಂದರು.
ಸತೀಶ್ ಜತೆ ರಾತ್ರಿ ಮಾತುಕತೆ ನಡೆದಿದ್ದು ನಿಜ. ಯಾವುದೋ ಮದುವೆಯಲ್ಲಿ ಸೇರಿಕೊಂಡು ರಾಜ್ಯದ, ಪಕ್ಷದ ವಿಚಾರ ಮಾತಾಡಿಕೊಂಡಿದ್ದೇವೆ ಎಂದರು.
ನಾನು ಎಂಬಿ ಪಾಟೀಲ್ ಅವರ ಜತೆಗೆ ಇನ್ವೆಸ್ಟರ್ ಕರೆಯುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆಂಧ್ರ ಪ್ರದೇಶದ ನಮಗೆ ಕಾಂಪಿಟೇಷನ್ ಬರ್ತಿದೆ. ತಮಿಳುನಾಡು, ತೆಲಂಗಾಣ ಕಾಂಪಿಂಟ್ ಮಾಡ್ತಿದೆ. ನಾವು ಹೇಗೆ ಕಾಂಪಿಟ್ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತಾಡಿದ್ದೇನೆ ಎಂದರು.
Sampriya
Publish Date: Fri, 05 Dec 2025 (16:30 IST)
Updated Date: Fri, 05 Dec 2025 (16:33 IST)