Publish Date: Fri, 26 Aug 2022 (15:09 IST)
Updated Date: Fri, 26 Aug 2022 (15:14 IST)
ಬಿಜೆಪಿಯಿಂದ ಸಾರ್ವಕರ್ ಪೋಟೋ ಹಂಚಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಅಭಿವೃದ್ಧಿ ಮಂತ್ರ ಹೇಳಲು ಬಿಜೆಪಿ ಅವರ ಕಡೆಯಿಂದ ಆಗುತ್ತಿಲ್ಲ.ಅವರು ಮತಗಳ ವಿಂಗಡಣೆ ಮಾಡಬೇಕು.ಗಲಾಟೆ ಮಾಡಿಸಬೇಕು.ಬಾಲಗಂಗಾಧರ ಅವರ ಪೋಟೋ ಹಂಚಿದ್ರೆ ಒಂದು ಅರ್ಥ ಇದೆ.ಅವರು ಗಣೇಶೋತ್ಸವಕ್ಕೆ ಶಕ್ತಿ ತುಂಬಿದ್ದವರು.ವಿಘ್ನ ನಿವಾರಣೆ ಮಾಡುವವನು ವಿನಾಯಕ.ಆ ವಿನಾಯಕನಿಗೂ ಸಾರ್ವಕರಗೂ ಏನು ಸಂಬಂಧ?ಅವರ ಪಾರ್ಟಿ ವಿಚಾರಗಳನ್ನು ಅವರೇ ಡಿಗ್ರೇಡ್ ಮಾಡಿಕೊಳ್ಳುತ್ತಿದ್ದಾರೆಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.