Publish Date: Wed, 03 Jun 2026 (09:45 IST)
Updated Date: Wed, 03 Jun 2026 (09:47 IST)
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಅವರ ಕಚೇರಿಯಲ್ಲಿ ಈ ವಿಶೇಷ ವ್ಯಕ್ತಿಯ ಫೋಟೋ ಇರಲಿದೆ. ಅವರು ಯಾರು ತಿಳಿದುಕೊಳ್ಳಿ.
ಇಂದು ಸಂಜೆ 4.05 ಕ್ಕೆ ಡಿಕೆ ಶಿವಕುಮಾರ್ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ಸಿಎಂ ಕಚೇರಿ ಸಿದ್ಧವಾಗಿದೆ. ಸಿದ್ದರಾಮಯ್ಯ ಹೆಸರು ತೆಗೆಯಲಾಗಿದ್ದು ಈಗ ಡಿಕೆ ಶಿವಕುಮಾರ್ ಹೆಸರು ಅಂಟಿಸಲಾಗಿದೆ.
ವಿಶೇಷವೆಂದರೆ ಡಿಕೆ ಶಿವಕುಮಾರ್ ಸಿಎಂ ಕಚೇರಿಯಲ್ಲಿ ವಿಶೇಷ ವ್ಯಕ್ತಿಯ ಫೋಟೋ ಇರಲಿದೆ. ಅವರೇ ಡಿಕೆಶಿ ತುಂಬಾ ನಂಬುವ ನೊಣವಿನಕೆರೆ ಅಜ್ಜಯ್ಯನ ಫೋಟೋ. ಸಿಎಂ ಆಗುವ ಮೊದಲು ಹಲವು ಬಾರಿ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಡಿಕೆಶಿ ಭೇಟಿ ನೀಡಿದ್ದರು.
ಅವರು ಸಿಎಂ ಎಂದು ಘೋಷಣೆಯಾದಾಗಲೂ ಮೌನ ಪಾಲಿಸುವಂತೆ ಅಜ್ಜಯ್ಯ ಸಲಹೆ ನೀಡಿದ್ದರು. ಅದನ್ನು ಡಿಕೆಶಿ ಪಾಲಿಸಿದ್ದರು ಕೂಡಾ. ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ಅಜ್ಜಯ್ಯನ ಆಶೀರ್ವಾದ ದೊಡ್ಡದು ಎಂದು ಡಿಕೆಶಿ ನಂಬುತ್ತಾರೆ. ಹೀಗಾಗಿ ತಮ್ಮ ಕಚೇರಿಯಲ್ಲೇ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ