Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗೆ ಶೂ ಕಳ್ಳತನದ ಚಿಂತೆ, ಶೂ ಕಾಯಲು ಓರ್ವ ಭದ್ರತಾ ಸಿಬ್ಬಂದಿ

DK Shivakumar

Krishnaveni K

ಚನ್ನಪಟ್ಟಣ , ಶನಿವಾರ, 21 ಸೆಪ್ಟಂಬರ್ 2024 (14:25 IST)
ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆ ಬಂದಿದ್ದ ಡಿಕೆ ಶಿವಕುಮಾರ್ ಗೆ ತಮ್ಮ ಶೂನದ್ದೇ ಚಿಂತೆಯಾಗಿದೆ. ಇದನ್ನು ಕಾಯಲು ಒಬ್ಬ ಭದ್ರತಾ ಸಿಬ್ಬಂದಿಯನ್ನಿಟ್ಟುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಲ್ಲೇ ಹೋದರೂ ಜನ ಅವರ ಬಳಿ ಮುತ್ತುವುದು ಸಹಜ. ಇಂದು ಚನ್ನಪಟ್ಟಣದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದಾಗಲೂ ಸಾಕಷ್ಟು ಜನ ಸೇರಿದ್ದರು. ಈ  ವೇಳೆ ಪುರೋಹಿತರು ಪೂಜೆ ಮಾಡುತ್ತಿದ್ದರು. ಈ ವೇಳೆ ಡಿಕೆಶಿ ತಮ್ಮ ಸಂಪುಟ ಸಹೋದ್ಯೋಗಿ ಜಮೀರ್ ಅಹ್ಮದ್ ಜೊತೆ ಬಂದಿದ್ದಾರೆ.

ಇಬ್ಬರೂ ಪೂಜೆಯಲ್ಲಿ ಪಾಲ್ಗೊಂಡಿದ್ದು ಬಳಿಕ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪೂಜೆ ವೇಳೆ ಡಿಕೆಶಿ ತಮ್ಮ ಶೂ ಕಳಚಲೇ ಬೇಕಾಗಿತ್ತು. ಆದರೆ ಅವರಿಗೆ ಜನರ ನೂಕುನುಗ್ಗಲಿನ ನಡುವೆ ತಮ್ಮ ಶೂ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ.

ಈ ಕಾರಣಕ್ಕೆ ಪೂಜೆ ನಡೆಯುವ ಸ್ಥಳದಲ್ಲೇ ಒಂದು ಮೂಲೆಯಲ್ಲಿ ಶೂ ಕಳಚಿಟ್ಟ ಡಿಕೆ ಶಿವಕುಮಾರ್ ತಮ್ಮ  ಒಬ್ಬ ಭದ್ರತಾ ಸಿಬ್ಬಂದಿಯನ್ನು ಚಪ್ಪಲಿ ಕಾಯಲು ಅಲ್ಲೇ ನಿಲ್ಲಿಸಿದ್ದರು. ಆ ಭದ್ರತಾ ಸಿಬ್ಬಂದಿ ಆ ಚಪ್ಪಲಿಯನ್ನು ತನ್ನ ಕಾಲ ಮಧ್ಯೆಯೇ ಇಟ್ಟುಕೊಂಡು ಜೋಪಾನ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ಲಡ್ಡು ಪ್ರಸಾದದ ಪಾವಿತ್ರ್ಯತೆ ಪುನರ್‌ಸ್ಥಾಪನೆ, ಆತಂಕ ಬೇಡ: ಟಿಟಿಡಿ ಸ್ಪಷ್ಟನೆ