ಪಕ್ಷದಲ್ಲಿ ಚರ್ಚಿಸಿ ನಿರ್ಧಾರ-ಮಾಜಿ ಸಿಎಂ ಜಗದೀಶ್​​​​ ಶೆಟ್ಟರ್​​

Webdunia
ಶುಕ್ರವಾರ, 31 ಮಾರ್ಚ್ 2023 (16:00 IST)
ವರುಣಾದಿಂದ BJP ರಾಜ್ಯ ಉಪಾಧ್ಯಕ್ಷ B.Y ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್​​​​ ಶೆಟ್ಟರ್​​ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಆ ವಿಚಾರವಾಗಿ ಚರ್ಚೆ ಮಾಡ್ತಾರೆ. ನನ್ನ ಗಮನಕ್ಕೆ ಯಾವುದು ಬಂದಿಲ್ಲ.. ಪಕ್ಷದ ವೇದಿಕೆಯಲ್ಲಿ ಏನು ಚರ್ಚೆ ಆಗುತ್ತೆ ನೋಡೋಣ ಎಂದು ಹೇಳಿದ್ರು. ಆಪರೇಷನ್ ಕಮಲಕ್ಕೆ ಬಲಿಯಾದವರನ್ನ ಕಾಂಗ್ರೆಸ್ ಎಂದಿಗೂ ವಾಪಾಸ್​​ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಹೇಳುತ್ತಿದ್ದವರು
ಈಗ ಮತ್ತೆ ಯಾಕೆ ಫೋನ್​​​ ಮಾಡಿ ಕರೆಯುತ್ತಿದ್ದಾರೆಂದು ಶೆಟ್ಟರ್ ಪ್ರಶ್ನಿಸಿದ್ರು. ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ. ಇತ್ತೀಚಿನ ಚುನಾವಣೆಗಳನ್ನ ಗಮನಿಸಿದ್ರೆ, ಮೇಘಾಲಯ, ಛತ್ತಿಸ್​​ಗಡ್, ನಾಗಾಲ್ಯಾಂಡ್​​ನಲ್ಲಿನ ಫಲಿತಾಂಶದಲ್ಲಿ ಕಾಂಗ್ರೆಸ್​ ಧೂಳಿಪಟವಾಗಿದೆ.. ಈ ಮೂಲಕ ಕಾಂಗ್ರೆಸ್​ನ ಅವಸಾನ ಪ್ರಾರಂಭವಾಗಿದೆ ಎಂದು ಜಗದೀಶ್​​ ಶೆಟ್ಟರ್​​ ವ್ಯಂಗ್ಯವಾಡಿದ್ರು. BJP ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ನವರಿಗೆ ಭಯ ಶುರುವಾಗಿದೆ.. ಕಾರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲ್ಲ. ರಾಜ್ಯದಲ್ಲಿ ಬಿಜೆಪಿ ಸ್ವಂತ ಸಂಖ್ಯೆಯಲ್ಲಿ ಅಧಿಕಾರಕ್ಕೆ ಬರುತ್ತೆ. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ ಎಂದು ತಿವಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಏ17ಕ್ಕೆ ಶಿಕ್ಷೆ ಪ್ರಕಟ

ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗದಲ್ಲಿ ಅವಘಡ, ಮೂವರಿಗೆ ಗಾಯ

17ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಕ್ಕೆ 9 ಕಾರ್ಮಿಕರು ಸಾವು, ಹಲವು ಮಂದಿಗೆ ಗಾಯ

ಪಶು ವೈದ್ಯೆ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಮೃಗಾಲಯದ ಗರ್ಭಿಣಿ ನೀರಾನೆ ಸಾವು

ಮುಂದಿನ ಸುದ್ದಿ
Show comments